|
ವಿಕಾಲಾಂಗರಿಗೆ ಉದ್ಯೋಗ ತರಬೇತಿ
ಬೆಂಗಳೂರು: ವಿಕಲಾಂಗರು ಸ್ವತಂತ್ರವಾಗಿ ಬದುಕಲು
ಅನುವಾಗುಂತೆ ಉದ್ಯೋಗಾವಕಾಶ ಕಲ್ಪಿಸಿ ಕೊಡಲು ರಾಜ್ಯ ಸರ್ಕಾರ ಈ
ತಿಂಗಳಿನಲ್ಲಿ ತರಬೇತಿ ಕಾರ್ಯಕ್ರಮ ಪ್ರಾರಂಭಿಸಲಿದೆ.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಕಾಲ್ಸೆಂಟರ್
ಹಾಗೂ ಕಂಪ್ಯೂಟರ್ ಶಿಕ್ಷಣ. ಅದಕ್ಕಿಂತ ಕಡಿಮೆ ಶಿಕ್ಷಣ ಪಡೆದವರಿಗೆ
ಸ್ವಯಂ ಉದ್ಯೋಗ ಮಾಡಲು ಪೂರಕ ಶಿಕ್ಷಣ ನೀಡಲಾಗುತ್ತದೆ.
ಪ್ರತಿ ಜಿಲ್ಲೆಗಳಲ್ಲಿ ೧೦೦ ಜನರನ್ನು ಆಯ್ಕೆ ಮಾಡಿ ತರಬೇತಿ
ನೀಡಲಾಗುತ್ತದೆ.
ಉತ್ತಮ ಶಿಕ್ಷಣ ಪಡೆದ ವಿಕಲಾಂಗರು ಕೆಲಸ ಪಡೆದಿದ್ದಾರೆ. ಆದರೆ
ಹೈಸ್ಕೂಲ್ ಶಿಕ್ಷಣ ಪಡೆದಿರುವ ಮತ್ತು ಪಡೆಯದಿರುವ ವಿಕಲಾಂಗರ
ಸ್ಥಿತಿ ಶೋಚನೀಯವಾಗಿದೆ.
೧.೫ ಕೋಟಿ ರೂ.ನ್ನು ತರಬೇತಿಗಾಗಿ ಮೀಸಲಿಡಲಾಗಿದೆ. ಮೊದಲ
ಹಂತದಲ್ಲಿ ೨೦ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿ ಬರಲಿದ್ದು ನಂತರ ಎಲ್ಲಾ
ಜಿಲ್ಲೆಗಳಿಗೂ ಜಾರಿಬರಲಿದೆ ಎಂದು ಅಂಗವಿಕಲ ಕಲ್ಯಾಣ ಇಲಾಖೆ ನಿರ್ದೇಶಕ
ವಿ.ಶ್ರೀರಾಮ ರೆಡ್ಡಿ ತಿಳಿಸಿದ್ದಾರೆ.
ಇನ್ನಷ್ಟು
ಬೆಳಗಾವಿಗೆ
ಆಶಾದಾಯಕವಾಗಿರುವ ೨೦೦೭
ಕರ್ನಾಟಕದಲ್ಲಿ ಅಧಿಕಗೊಂಡ
ಹೂಡಿಕೆ
ಅಧಿಕಾರ ವಹಿಸಿಕೊಂಡ
ಪ್ರಹ್ಲಾದ್ ಬಿ.ಮಹಿಷಿ
ಸೆರೆಸಿಕ್ಕಿದ ಲಹಿರಿ ಹಂತಕರು
ಆನ್ಲೈನ್ ಲಾಟರಿ ರದ್ದು ಅಸಾಧ್ಯ
ಸಾರಾಯಿ ನಿಷೇಧಕ್ಕೆ
ಗಂಭೀರ ಚಿಂತನೆ
ಉರುಳಿಗೆ ಕೊರಳು ನೀಡಿದ
ಸದ್ದಾಂ
ತೆರೆಯ ಮೇಲೆ ಶಾರುಕ್-
ಕಾಜೋಲ್?
ಸಿಇಟಿ ಗೆ ಶಿಕ್ಷಕರ
ವಿದ್ಯಾರ್ಥಿಗಳ ವಿರೋಧ
|