|
ಸುಪ್ರೀಂ ಕೋರ್ಟ್ಗೆ ಹೊಸ ಮುಖ್ಯನ್ಯಾಯಾಧೀಶ
ನವದೆಹಲಿ: ರಾಷ್ಟ್ರಪತಿ ಅಬ್ದುಲ್ ಕಲಾಂ ಸವೋಚ್ಚ
ನ್ಯಾಯಾಲಯದ ಮುಂದಿನ ಮುಖ್ಯನ್ಯಾಯಾಧೀಶರನ್ನಾಗಿ ಕೆ.ಜಿ
ಬಾಲಕೃಷ್ಣನ್ ಅವರನ್ನು ನೇಮಕ ಮಾಡಿದ್ದಾರೆ.
ಬಾಲಕೃಷ್ಣ ಅವರು ಜನವರಿ ೧೪ರಂದು ನಿವೃತ್ತಿ ಹೊಂದಲಿರುವ ವೈ.ಕೆ
ಸಬರ್ವಾಲ್ ಅವರ ಸ್ಥಾನಕ್ಕೆ ಬರಲಿದ್ದಾರೆ. ಮುಂದಿನ ಮೂರು ವರ್ಷ
ನಾಲ್ಕು ತಿಂಗಳು ಬಾಲಕೃಷ್ಣನ್ ಈ ಅತ್ಯುನ್ನತ ಸ್ಥಾನವನ್ನು
ಅಲಂಕರಿಸಲಿದ್ದು ಮೇ ೨೦೧೦ಕ್ಕೆ ನಿವೃತ್ತಿ ಹೊಂದಲಿದ್ದಾರೆ.
ಮೇ ೧೨, ೧೯೪೫ರಂದು ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ
ತಲಯೊಲಪರಂಬು ಎನ್ನುವಲ್ಲಿ ಕೆ.ಜಿ ಬಾಲಕೃಷ್ಣನ್ ಜನಿಸಿದರು.
ಎರ್ನಾಕುಲಂ ಮಹಾರಾಜಾ ಕಾನೂನು ಕಾಲೇಜಿನಿಂದ ಕಾನೂನು ಪದವಿ
ಪಡೆದ ಅವರು ೧೯೬೮ರಲ್ಲಿ ಕೊಚ್ಚಿನ್ ಬಾರ್ ಕೌನ್ಸಿಲ್ನಲ್ಲಿ ವಕೀಲರಾಗಿ
ಸೇರ್ಪಡೆಗೊಂಡರು. ೧೯೭೩ರಲ್ಲಿ ಮುನ್ಸಿಪಲ್ ನ್ಯಾಯಾಧೀಶರಾಗಿ
ನೇಮಕಗೊಂಡ ಅವರು ೧೯೮೨ರಲ್ಲಿ ಉಪ ಸೆಷನ್ ನ್ಯಾಯಾಧೀಶರಾಗಿ
ನೇಮಕಗೊಂಡರು.
ಅಧೀನ ನ್ಯಾಯಾಲಯಗಳಿಂದ ಸರ್ವೋಚ್ಚ ನ್ಯಾಯಾಲಯ ತಲುಪಿದ
ಕೆಲವೇ ನ್ಯಾಯಾಧೀಶರಲ್ಲಿ ಬಾಲಕೃಷ್ಣನ್ ಒಬ್ಬರಾಗಿದ್ದಾರೆ.
ಇನ್ನಷ್ಟು
ಸಹಪಾಠಿಯನ್ನೇ ಕೊಂದ
ವಿದ್ಯಾರ್ಥಿಗಳು
ಹೊಸ ರೈಲುಮಾರ್ಗಕ್ಕೆ
ರಾಜ್ಯದ ಮನವಿ
ಕೃಷಿ ಉತ್ಪನ್ನಗಳ ಬೆಲೆ
ಕುಸಿಯಬಹುದು: ಪವಾರ್
ಯಶ್ರ ಚಿತ್ರದಲ್ಲಿ
ಮರಳಲಿರುವ ಮಾಧುರಿ
ಜೆಸ್ಸಿಕಾ ಲಾಲ್ ಹತ್ಯೆ:
ಮನುಗೆ ಜೀವಾವಧಿ ಶಿಕ್ಷೆ
ಕಾರ್ಟೂನ್ ಪ್ರಿಯರಿಗೆ
ವಿಷಾದದ ಸುದ್ದಿ
ಚಂಪಾರ ವರ್ತನೆ ಖಂಡಿಸಿದ
ಕುಮಾರಸ್ವಾಮಿ
ಜೆಸ್ಸಿಕಾ ಲಾಲ್ ಹತ್ಯೆ:
ಮನು ದೋಷಿ
|