|
ರಾಜ್ಯದ ಮೇಲೆ ಚುನಾವಣಾ ಆಯೋಗದ ದೂರು
ಬೆಂಗಳೂರು: ಸ್ಥಳೀಯ ಚುನಾವಣೆ ನಡೆಸಲು ಕರ್ನಾಟಕ
ರಾಜ್ಯ ಸರ್ಕಾರ ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಚುನಾವಣಾ
ಆಯೋಗ ರಾಜ್ಯಪಾಲರಲ್ಲಿ ದೂರು ಸಲ್ಲಿಸಿದೆ.
ಸಂವಿಧಾನದ ಪ್ರಕಾರ ಅವಧಿ ಮುಗಿಯುವ ಮುನ್ನವೇ ಚುನಾವಣೆ
ನಡೆಸ ಬೇಕು ಆದರೆ ಈಗಾಗಲೇ ಆರು ಮಹಾನಗರ ಪಾಲಿಕೆ ಮತ್ತು
೨೦೭ ನಗರ ಸರ್ಕಾರಿ ಸಂಸ್ಥೆಗಳ ಅಧಿಕಾರವಧಿ ಮುಗಿದಿದೆ. ರಾಜ್ಯ
ಸರ್ಕಾರ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಚುನಾವಣಾ
ಆಯುಕ್ತರು ರಾಜ್ಯ ಪಾಲರಿಗೆ ವಿವರಣೆ ನೀಡಿದ್ದಾರೆ.
`ಚುನಾವಣೆ ಸಂಬಂಧ ಸರಕಾರಕ್ಕೆ ಹಲವು ಬಾರಿ ಪತ್ರ ಬರೆದರೂ
ಸರಕಾರದಿಂದ ಯಾವುದೇ ರೀತಿಯ ಉತ್ತರ ಬಂದಿಲ್ಲ. ಚುವಾವಣೆಯ
ವಿಷಯವಾಗಿ ವಿಭಾಗೀಯ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಸಭೆ
ನಡೆಸಲಾಗಿದೆ. ಮತದಾರರ ಪಟ್ಟಿ ಸಿದ್ಧ ಪಡಿಸಲಾಗಿದೆ.
೧೫೦ ಸಂಸ್ಥೆಗಳ ವಾರ್ಡ್ ಮರುವಿಂಗಡಣೆ ಪೂರ್ತಿಯಾಗಿದೆ. ಆದರೆ
ಮೀಸಲು ಕ್ಷೇತ್ರವನ್ನು ನಿಗದಿಗೊಳಿಸುವ ಸರ್ಕಾರದ ಕೆಲಸ ಇನ್ನೂ
ಆಗಿಲ್ಲ. ಅದೊಂದೇ ಈಗ ಬಾಕಿ ಇರುವ ಕೆಲಸವಾಗಿದೆ' ಎಂದು ರಾಜ್ಯ
ಚುನಾವಣಾ ಆಯುಕ್ತ ಎಂ. ಆರ್. ಹೆಗಡೆ ಶನಿವಾರ ರಾಜ್ಯಪಾಲ ಟಿ.ಎನ್.
ಚತುರ್ವೇದಿಯವರನ್ನು ರಾಜಭವನದಲ್ಲಿ ಭೇಟಿಯಾಗಿ
ಮಾತುಕತೆ ನಡೆಸಿದರು.
ಇನ್ನಷ್ಟು
`ಲಾಡೆನ್'ಗೆ ಕಂಡಲ್ಲಿ
ಗುಂಡಿಕ್ಕಲು ಸರ್ಕಾರ ಆಜ್ಞೆ
ರವಿವಾರ ಬಿಜೆಪಿ
ರಾಜ್ಯಾಧ್ಯಕ್ಷರ ಚುನಾವಣೆ
ಮಾನವಾಭಿವೃದ್ಧಿಯಲ್ಲಿ
ಕರ್ನಾಟಕಕ್ಕೆ ಏಳನೆ ಸ್ಥಾನ
ಝಂಕ್ ಆಹಾರ ಕೋಲಾಗಳ
ಮೇಲೆ ನಿರ್ಬಂಧ?
AIIMS
ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ
ಹೊರಗಿಂದ ಬಂದ
ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ
ರಾಜ್ಯದಲ್ಲಿ ಮುಷ್ಕರಕ್ಕೆ
ನೀರಸ ಪ್ರತಿಕ್ರಿಯೆ
ಬಜೆಟ್ನ ಶೇ. ೨೦ರಷ್ಟು
ಕೃಷಿಗೆ ಮೀಸಲು
ಶ್ರೀಗಂಧ ಅಂಚೆ ಚೀಟಿ
ಬಿಡುಗಡೆ
ಯುವರಾಜ್
ಹುಟ್ಟುಹಬ್ಬದಲ್ಲಿ ಗಲಾಟೆ
|