|
ರವಿವಾರ ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆ
ಬೆಂಗಳೂರು: ಬಿಜೆಪಿಯ ರಾಜ್ಯಾಧ್ಯಕ್ಷರ ಚುನಾವಣೆ
ಭಾನುವಾರ (ಡಿ.೧೭) ನಡೆಯಲಿದೆ.
ಬಿಜೆಪಿ ವರಿಷ್ಠರ ಸಮ್ಮತಿಯ ಮೇರೆಗೆ ಸದಾನಂದ ಗೌಡ ತಮ್ಮ
ನಾಮಪತ್ರವನ್ನು ಶನಿವಾರ ಸಲ್ಲಿಸಲಿದ್ದಾರೆ.
ಸದಾನಂದ ಗೌಡರ ವಿರುದ್ಧ ಬೇರೆ ಅಭ್ಯರ್ಥಿಗಳು ಕಣಕ್ಕಿಳಿಯುವ
ಸಾಧ್ಯತೆಗಳಿಲ್ಲ.
ಬಿಜೆಪಿಯ ರಾಜ್ಯ ಚುನಾವಣಾಧಿಕಾರಿ ರಘುನಾಥ್ ರಾವ್ ಮಲ್ಕಾಪುರೆ
ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ್ದು ಶನಿವಾರ ೧ ರಿಂದ ೨
ಗಂಟೆಯವರೆಗೆ ನಾಮಪತ್ರ ಸಲ್ಲಿಕೆ, ೨.೩೦ ರಿಂದ ೩.೩೦ ರವರೆಗೆ
ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶ ನೀಡಲಾಗಿದೆ.
ರವಿವಾರ ಬೆಳಿಗ್ಗೆ ೧೦.೩೦ ರಿಂದ ೧೧.೩೦ ರವರೆಗೆ ಚುನಾವಣೆ
ನಡೆಯಲಿದ್ದು ನಂತರ ನೂತನ ಅಧ್ಯಕ್ಷರ ಹೆಸರನ್ನು
ಪ್ರಕಟಿಸಲಾಗುವುದು.
ಚುನಾವಣಾ ವೀಕ್ಷಕರಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಓಂ
ಪ್ರಕಾಶ್ ಮಾಥುರ್ ರಾಜ್ಯ ಉಸ್ತುವಾರಿ ತಾವರ್ ಚಂದ್ ಗೆಹಲೋಟ್
ಶುಕ್ರವಾರ ರಾತ್ರಿಯೇ ನಗರಕ್ಕೆ ಆಗಮಿಸಿದ್ದಾರೆ.
ವೆಂಕಯ್ಯನಾಯ್ಡು ಮತ್ತು ಅನಂತ್ ಕುಮಾರ್ ಶನಿವಾರ
ಬೆಂಗಳೂರಿಗೆ ಆಗಮಿಸಲಿದ್ದಾರೆ.
ಇನ್ನಷ್ಟು
ಝಂಕ್ ಆಹಾರ ಕೋಲಾಗಳ
ಮೇಲೆ ನಿರ್ಬಂಧ?
AIIMS
ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ
ಹೊರಗಿಂದ ಬಂದ
ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ
ರಾಜ್ಯದಲ್ಲಿ ಮುಷ್ಕರಕ್ಕೆ
ನೀರಸ ಪ್ರತಿಕ್ರಿಯೆ
ಬಜೆಟ್ನ ಶೇ. ೨೦ರಷ್ಟು
ಕೃಷಿಗೆ ಮೀಸಲು
ಶ್ರೀಗಂಧ ಅಂಚೆ ಚೀಟಿ
ಬಿಡುಗಡೆ
ಯುವರಾಜ್
ಹುಟ್ಟುಹಬ್ಬದಲ್ಲಿ ಗಲಾಟೆ
|