|
ಶ್ರೀಗಂಧ ಅಂಚೆ ಚೀಟಿ ಬಿಡುಗಡೆ
ಬೆಂಗಳೂರು: ಕರ್ನಾಟಕದ ಶ್ರೀಗಂಧ
ಶ್ರೀಮಂತಿಕೆಯನ್ನು ಸಾರುವ ಶ್ರೀಗಂಧ ಪರಿಮಳವನ್ನು ಬೀರುವ
ಅಂಚೆ ಚೀಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು
ಕರ್ನಾಟಕ ವೃತ್ತದ ಅಂಚೆ ಮಹಾ ನಿದೇರ್ಶಕಿ ಮೀರಾ ದತ್ತಾ ತಿಳಿಸಿದ್ದಾರೆ.
ದಿಲ್ಲಿಯಲ್ಲಿರುವ `ಕಾವೇರಿ' ವಸ್ತುಪ್ರದರ್ಶನಾಲಯದಲ್ಲಿರುವ
ಕಲಾಕೃತಿಯನ್ನು ಆಧರಿಸಿ ಈ ಅಂಚೆ ಚೀಟಿಯನ್ನು
ರೂಪಿಸಲಾಗಿದೆಯಂತೆ.
ದಿಲ್ಲಿಯಲ್ಲಿ ಬುಧವಾರವೇ ಈ ಅಂಚೆ ಚೀಟಿಯನ್ನು
ಬಿಡುಗಡೆಮಾಡಲಾಗಿದ್ದು ಕರ್ನಾಟಕಕ್ಕೆ ಇದೊಂದು ಸಂಭ್ರಮದ
ವಿಷಯವಾಗಿದೆ ಎಂದು ಮೀರಾ ದತ್ತಾ ವರ್ಣಿಸಿದ್ದಾರೆ.
ಅಂಚೆ ಚೀಟಿ, ಕವರುಗಳಿಂದ ಗಂಧದ ಸುವಾಸನೆಯನ್ನು
ಆಸ್ವಾದಿಸಬಹದಾಗಿದೆ. ನಾಸಿಕ್ ಅಂಚೆ ಚೀಟಿ ಮುದ್ರಣಾಲಯದಲ್ಲಿ
ಎಚ್ಚರಿಕೆಯಿಂದ ೩೦ ಲಕ್ಷ ಈ ವಿಶೇಷ ಅಂಚೆ ಚೀಟಿಗಳನ್ನು
ಮುದ್ರಿಸಲಾಗುತ್ತಿದೆ ಎಂದು ಮೀರಾ ದತ್ತ ತಿಳಿಸಿದರು.
ಇನ್ನಷ್ಟು
ಬಾಹ್ಯಾಕಾಶಕ್ಕೆ ಸೇರಿದ
ಸುನೀತ ವಿಲಿಯಮ್ಸ್
ಕುಮಾರಸ್ವಾಮಿಯ ಹೊಸ
ಅವತಾರ
ಶಿವಮೊಗ್ಗದಲ್ಲಿ
ಹೆಚ್ಚುತ್ತಿರುವ `ನುಡಿಹಬ್ಬ'ದ ಸಡಗರ
ಬಹರೈನ್ನಲ್ಲಿ `ಬುರುಡೆ
ಭವಿಷ್ಯ' ಹಾಸ್ಯ ರೂಪಕ
೭೦೦ ಕೋಟಿ ರೂ. ಐಟಿ
ರಫ್ತು ಮಾಡಿದ ಮೈಸೂರು
ಕೇಂದ್ರದ ಮಲತಾಯಿ
ಧೋರಣೆಗೆ ವಿರೋಧ
ವಿಮಾನ ಅಪಹರಣ
ಭಯ: ಬಿಗಿ ಭದ್ರತೆ
|