|
ರಾಜ್ಯದ ಆರು ಜಿಲ್ಲೆಗಳಿಗೆ ೨,೬೮೯ ಕೋಟಿ ರೂ.
ಬೆಂಗಳೂರು: ರೈತರ ಆತ್ಮಹತ್ಯೆಗಳನ್ನು ತಡೆಯುವ
ಸಲುವಾಗಿ ಕೇಂದ್ರ ಸರ್ಕಾರ ರಾಜ್ಯದ ಆರು ಜಿಲ್ಲೆಗಳಿಗೆ ೨,೬೮೯ ಕೋಟಿ
ರೂ. ಬಿಡುಗಡೆ ಮಾಡಿದೆ.
ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ
ಮತ್ತು ಚಿತ್ರದುರ್ಗ ಫಲಾನುಭವಿ ಜಿಲ್ಲೆಗಳಾಗಿವೆ. ಮುಂದಿನ
ಮೂರು ವರ್ಷಗಳಲ್ಲಿ ಈ ಜಿಲ್ಲೆಗಳ ರೈತರಿಗೆ ಸಾಲ ನೀಡುವುದು, ಬಡ್ಡಿ
ಮನ್ನಾ ಮಾಡುವುದನ್ನು ಈ ಪ್ಯಾಕೇಜ್ ಒಳಗೊಂಡಿದೆ.
ಜಲಸಂಪನ್ಮೂಲ, ತೋಟಗಾರಿಕೆ, ಕೃಷಿ, ಸಹಕಾರ ಇಲಾಖೆಗಳ ಮೂಲಕ
ಹಣ ಬಿಡುಗಡೆ ಮಾಡಲಾಗುತ್ತದೆ. ಈಗಾಗಲೇ ರಾಜ್ಯ ಕೃಷಿ ಇಲಾಖೆಯ
ಮೂಲಕ ಪ್ರತಿ ಜಿಲ್ಲೆಗೆ ತಲಾ ೫೦ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ.
ರಾಜ್ಯದ ೧೩ ಜಿಲ್ಲೆಗಳಿಗೆ ಹಣ ಬಿಡುಗಡೆ ಮಾಡುವಂತೆ ಕೇಂದ್ರ
ಸರ್ಕಾರವನ್ನು ಕೋರಲಾಗಿತ್ತು. ಆದರೆ ೬ ಜಿಲ್ಲೆಗಳಿಗೆ ಮಾತ್ರ ಹಣ
ನೀಡಲಾಗಿದೆ. ಈ ವರ್ಷ ಹಿಂಗಾರು ಮಳೆಯ ವ್ಯವಸಾಯದ ಬಿತ್ತನೆ
ಬೀಜಕ್ಕಾಗಿ ೧೦ ಕೋಟಿ ರೂ. ಸಬ್ಸಿಡಿ ನೀಡಲಾಗಿದೆ ಎಂದು ಮಂಗಳವಾರ
ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಕೃಷಿ ಸಚಿವ ಬಂಡೆಪ್ಪ
ಕಾಶೆಂಪೂರ್ ತಿಳಿಸಿದ್ದಾರೆ.
ಇನ್ನಷ್ಟು
ಕಲಾಂಗೆ ಬೆಂಬಲ ನೀಡಿದ ಬಿಜೆಪಿ
ರಾಜ್ಯಕ್ಕೆ ಕೈಕೊಟ್ಟ
ಮುಂಗಾರು ಮಳೆ
ಏರ್ ಡೆಕ್ಕನ್ಗೆ ಎಕ್ಸ್ಪ್ರೆಸ್
ಟ್ರಾವೆಲ್ ಪ್ರಶಸ್ತಿ
ಮುಂಬೈಯಲ್ಲಿ ಮೊಳಗಿದ
ಕನ್ನಡದ ಕೂಗು
ಚುನಾವಣೆ ಗೆಲ್ಲಲು ಅಡ್ಡದಾರಿ
ಹಿಡಿದ ಪಕ್ಷಗಳು
ಮಮತಾ-ಮೇಧಾರನ್ನು
ತಡೆದ ಪೊಲೀಸ್
ಇ-ಸರ್ಕಾರ ನಿರ್ಮಿಸಲು
ಕೈಜೋಡಿಸಿದ ಎಚ್ಪಿ
|