|
ಮಂಗಳೂರಿಗೆ ಬಂದಿಳಿದ ಮೊದಲ ಸಖಾಲಿನ್ ತೈಲ
ಮಂಗಳೂರು: ಪ್ರಥಮವಾಗಿ ರಷ್ಯಾದ ಸಕಾಲಿನ್ ತೈಲ
ನಿಕ್ಷೇಪದಿಂದ ನವಮಂಗಳೂರಿಗೆ ಬಂದಿಳಿದ ಕಚ್ಚಾ ತೈಲದ ಹಡಗನ್ನು
ಶನಿವಾರ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ
ಮುರಳಿ ದೆವೋರಾ ನವ ಮಂಗಳೂರಿನ ಬಂದರಿನಲ್ಲಿ
ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡಿದ
ದೆವೋರಾ `ಕರ್ನಾಟಕದಲ್ಲಿ ಅಧಿಕವಾಗಿರುವ ಮಾರಾಟ ತೆರಿಗೆಯನ್ನು
ಇಳಿಸಲು ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ
ಪೆಟ್ರೋಲ್ ಮತ್ತು ಡಿಸೈಲ್ ಬೆಲೆ ಇಳಿಸಿದೆ. ಇದರ ಪ್ರಯೋಜನ
ಎಲ್ಲರಿಗೂ ದೊರೆಯುವಂತಾಗಬೇಕು' ಎಂದು ಹೇಳಿದರು.
ಕಚ್ಚಾ ತೈಲವನ್ನು ಭಾರತದಲ್ಲಿನ ರಷ್ಯಾದ ರಾಯಭಾರಿ ಟ್ರಿಬ್ನಿಕೊ
ಕೇಂದ್ರ ಸಚಿವ ಮುರಳಿ ದಿವೋರಾ ಅವರಿಗೆ ಹಸ್ತಾಂತರಿಸಿದರು.
ಸಮಾರಂಭದಲ್ಲಿ ರಷ್ಯಾದ ರಾಯಭಾರಿ ಟ್ರಬ್ನಿಕೊ, ಆಡಳಿತ
ಸುಧಾರಣಾ ಸಮಿತಿಯ ಅಧ್ಯಕ್ಷ ವೀರಪ್ಪಾ ಮೋಯಿಲಿ ಮತ್ತು ಒನ್ಜಿಸಿ
ಗೆ ಸೇರಿದ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.
ಇನ್ನಷ್ಟು
ಸಶಸ್ತ್ರ ಪಡೆ ಕಾಯಿದೆಗೆ
ತಿದ್ದುಪಡಿ : ಪ್ರಧಾನಿ
ಕೇರಳದಲ್ಲಿ ಹೊಸ ಚಿನ್ನದ
ಗಣಿ ಪತ್ತೆ
ಜಾತಿಗಿಂತ ತರಬೇತಿಗೆ
ಪ್ರಾಮುಖ್ಯತೆ : ಎನ್ಆರ್ಎನ್
ರವಿವಾರದಿಂದ ಬೆಂಗಳೂರು
ಹಬ್ಬ
ಬಿಜೆಪಿ ನಾಯಕನ ಹತ್ಯೆ:
ಮರುಕಳಿಸಿದ ಹಿಂಸೆ
ಸಿದ್ಧು ಮೇಲಿದ್ದ ಕೊಲೆ
ಆರೋಪ ಸಾಬೀತು
ಜನರಿಗೆ ಹೊರೆಯಾದ
ಸರ್ಕಾರದ `ಕಡ್ಡಾಯಗಳು'
ಮಹಾರಾಷ್ಟ್ರದಲ್ಲಿ
ಭುಗಿಲೆದ್ದ ಹಿಂಸಾಚಾರ
|