|
ಜಾತಿಗಿಂತ ತರಬೇತಿಗೆ ಪ್ರಾಮುಖ್ಯತೆ ನೀಡಿ: ಎನ್ಆರ್ಎನ್
ಬೆಂಗಳೂರು: `ಮೀಸಲಿಗಿಂತ ತರಬೇತಿಗೆ ಪ್ರಾಮುಖ್ಯತೆ
ನೀಡುವುದರಿಂದ ನಮ್ಮ ಜನರ ಏಳಿಗೆ ಸಾಧ್ಯವಿದೆ. ಧರ್ಮ ಅಥವಾ
ಜಾತಿ ಆಧಾರದ ಮೇಲೆ ಮೀಸಲನ್ನು ವಿರೋಧಿಸುವೆ' ಎಂದು
ಇನ್ಫೋಸಿಸ್ನ ಆರ್. ಎನ್. ನಾರಯಣಮೂರ್ತಿ ಹೇಳಿದರು. ಅವರು
ಶುಕ್ರವಾರ ಐಇಟಿ (ಎಂಜನೀಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ)
ಶಾಖೆಯನ್ನು ಉದ್ಘಾಟಿಸಲು ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ
ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಐಇಟಿ ಸಂಸ್ಥೆ ಏರ್ಪಡಿಸಿದ್ದ `ಐಟಿ ಕ್ಷೇತ್ರದಲ್ಲಿ
ತಾಂತ್ರಿಕ ಆವಿಷ್ಕಾರ ನಿರ್ವಹಣೆ' ಎನ್ನುವ ವಿಚಾರಸಂಕಿರಣದಲ್ಲಿ
ನಾರಾಯಣಮೂರ್ತಿ ಪ್ರಾಸ್ತಾವಿಕ ಭಾಷಣ ಮಾಡುತ್ತ `ನಾವು ಪ್ರಾಥಮಿಕ
ಶಿಕ್ಷಣ ವಿಚಾರದಲ್ಲೇ ಸಂಪೂರ್ಣ ವಿಫಲರಾಗಿದ್ದೇವೆ. ಪ್ರಾಥಮಿಕ ಮತ್ತು
ಪ್ರೌಢ ಶಿಕ್ಷಣದ ಗುಣಮಟ್ಟ ಹೆಚ್ಚಿಸಿದರೆ ತನ್ನಿಂದ ತಾನೇಮಾನವ
ಸಂಪನ್ಮೂಲ ಅಭಿವೃದ್ಧಿ ಹೊಂದುತ್ತದೆ. ಮೀಸಲು ನೀಡುವ ಮೂಲಕ
ಯಾವ ಸಮಸ್ಯೆಯೂ ಪರಿಹಾರವಾಗದು' ಎಂದು
ಅಭಿಪ್ರಾಯಪಟ್ಟರು.
ಐಇಟಿ ಸಂಸ್ಥೆಯ ಪಾಲ್ ಜಾಕ್ಸನ್ ಭಾರತದಾದ್ಯಂತ ತಾಂತ್ರಿಕ ವಿಷಯ
ಕುರಿತ ವಿಚಾರ ಸಂಕೀರ್ಣವನ್ನು ಏರ್ಪಡಿಸುವುದಾಗಿ ಹೇಳಿದರು.
ಐಇಟಿ ಮತ್ತು ಎಆರ್ಎಮ್ ಸಂಸ್ಥೆಗಳು ಪರಸ್ಪರ ಒಪ್ಪಂದ
ಮಾಡಿಕೊಂಡು ಭಾರತೀಯ ಎಂಜಿನೀಯರುಗಳ ಸದಸ್ಯತ್ವವನ್ನು
ಆಹ್ವಾನಿಸಿದೆ.
ಇನ್ನಷ್ಟು
ಬಿಜೆಪಿ ನಾಯಕನ ಹತ್ಯೆ:
ಮರುಕಳಿಸಿದ ಹಿಂಸೆ
ಸಿದ್ಧು ಮೇಲಿದ್ದ ಕೊಲೆ
ಆರೋಪ ಸಾಬೀತು
ಜನರಿಗೆ ಹೊರೆಯಾದ
ಸರ್ಕಾರದ `ಕಡ್ಡಾಯಗಳು'
ಮಹಾರಾಷ್ಟ್ರದಲ್ಲಿ
ಭುಗಿಲೆದ್ದ ಹಿಂಸಾಚಾರ
ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ
ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ
ಕರ್ನಾಟಕ ಪ್ರಿಂಟರ್ಸ್ ಜೊತೆ ಜೆರಾಕ್ಸ್ ಒಪ್ಪಂದ
|