|
ಬಿಜೆಪಿ ನಾಯಕನ ಹತ್ಯೆ: ದ.ಕದಲ್ಲಿ ಮರುಕಳಿಸಿದ ಹಿಂಸೆ
ಮಂಗಳೂರು: ಮಂಗಳೂರಿನ ಮೂಲ್ಕಿ ನಗರ ಸಭೆ
ಸದಸ್ಯ ಮತ್ತು ಸ್ಥಳೀಯ ಬಿಜೆಪಿ ಮುಖಂಡರಾದ ಸುಖಾನಂದ
ಶೆಟ್ಟಿಯನ್ನು ಯುವಕರ ಗೊಂಪೊಂದು ಹತ್ಯೆ ಮಾಡಿದೆ.
ಇದನ್ನು ವಿರೋಧಿಸಿ ಮುಲ್ಕಿಯಲ್ಲಿ ಹಿಂಸಾಚಾರ ಪ್ರಾರಂಭವಾಗಿ,
ಪೊಲೀಸರು ಗೋಲಿಬಾರ್ ನಡೆಸಿದ್ದರಿಂದ ಇಬ್ಬರು ಮರಣ ಹೊಂದಿದ್ದಾರೆ.
ಅನೇಕರು ಗಾಯಗೊಂಡಿದ್ದಾರೆ.
ಕುಳಾಯಿ ಹೊನ್ನೆಕಟ್ಟೆಯ ಬಳಿ ಇರುವ ಶೆಟ್ಟಿಯವರ ಕಛೇರಿಯ ಬಳಿ
ನಾಲ್ಕೈದು ದುಷ್ಕರ್ಮಿಗಳು ಶೆಟ್ಟಿಯವರ ಮೇಲೆ ತಲವಾರಿನಿಂದ
ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ
ಶೆಟ್ಟಿಯವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ
ಕೊನೆಯುಸಿರೆಳೆದಿದ್ದಾರೆ.
ಹತ್ಯೆ ಮಾಡಲು ಬಳಸಿದ ಕ್ವಾಲಿಸ್ ವಾಹನವನ್ನು ಜೋ ಕಟ್ಟೆಯ ಬಳಿ
ವಶಪಡಿಸಿಕೊಳ್ಳಲಾಗಿದೆ.
ಹತ್ಯೆಯ ಸುದ್ದಿ ಎಲ್ಲ ಕಡೆ ಹಬ್ಬುತ್ತಿದ್ದಂತೆಯೇ ಸುರತ್ಕಲ್
ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಯಿತು.
ಹತ್ಯೆಗೆ ಕಾರಣವಾದವರನ್ನು ಬಂಧಿಸಲು ವಿಶೇಷ ಪೊಲೀಸ್ ತಂಡ
ರಚಿಸಲಾಗಿದೆ.
ಮೂಲ್ಕಿ ಠಾಣೆಯ ವ್ಯಾಪ್ತಿಯಲ್ಲಿ ಡಿ.೪ರ ವರೆಗೆ ನಿಷೇಧಾಜ್ಞೆ
ಜಾರಿಮಾಡಲಾಗಿದೆ.
ಇನ್ನಷ್ಟು
ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ
ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ
ಕರ್ನಾಟಕ ಪ್ರಿಂಟರ್ಸ್ ಜೊತೆ ಜೆರಾಕ್ಸ್ ಒಪ್ಪಂದ
ರಿಚರ್ಡ್ಸ್ ದಾಖಲೆ ಮುರಿದ ಮಹಮದ್ ಯೂಸಫ್
ವಿಟಿಯು: ಆನ್ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭ
ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ
ಭಾರತ-ಈಜಿಪ್ಟ್ ಐಟಿ
ಕ್ಷೇತ್ರದಲ್ಲಿ ಒಪ್ಪಂದ
ಆಯ್ಕೆ ಮಾಡಿ ಕೋರ್ಸ್
ಬದಲಾವಣೆ ಇಲ್ಲ : ಸಿಇಟಿ
ಭಾರಿ ಮೊತ್ತದ ಪ್ರಶಸ್ತಿಗೆ
ನಿರ್ಧಾರ : ಬೆಂಮಸಾಸಂ
ಶಿಬು: ಮೊದಲ ಕೊಲೆಗಾರ
ಕೇಂದ್ರ ಸಚಿವ
|