|
ಸೌರವ್ ಮತ್ತೆ ಭಾರತ ಟೆಸ್ಟ್ ತಂಡಕ್ಕೆ
ಹೈದರಾಬಾದ್: ಬಂಗಾಳ ತಂಡದ ನಾಯಕ ಸೌರವ್ ಗಂಗೂಲಿ
ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಇತ್ತೀಚಿಗೆ ದುಲೀಪ್ ಟ್ರೋಫಿಯಲ್ಲಿ ಸೌರವ್ ಹೊಡೆದ ಶತಕ
ಅವರನ್ನು ಭಾರತ ತಂಡಕ್ಕೆ ಸೇರಿಸುವಲ್ಲಿ ಸಹಾಯಕವಾಗಿದೆ.
ವಿವಿಎಸ್ ಲಕ್ಷ್ಮಣ್ ಅವರನ್ನು ಈಗಾಗಲೇ ಏಕದಿನ ಪಂದ್ಯಕ್ಕಾಗಿ
ಕರೆಸಿಕೊಳ್ಳಲಾಗಿದೆ.
ಟೆಸ್ಟ್ ಪಂದ್ಯಾವಳಿಗಳಿಗೆ ಲಕ್ಷ್ಮಣ್ ಅವರನ್ನು ಉಪ ನಾಯಕರನ್ನಾಗಿ
ಆರಿಸಲಾಗಿದೆ. ಏಕದಿನ ತಂಡದಲ್ಲಿದ್ದ ದಿನೇಶ್ ಮೊಂಗಿಯಾ, ಮಹಮದ್
ಕೈಫ್, ಅಜಿತ್ ಅಗರ್ಕರ್ ಮತ್ತು ಸುರೇಶ್ ರೈನಾ ಅವರನ್ನು ಟೆಸ್ಟ್
ತಂಡದಿಂದ ಕೈ ಬಿಡಲಾಗಿದೆ.
ಪಠಾಣ್ ಕಳೆದ ಎಕದಿನ ಪಂದ್ಯದಲ್ಲಿ ತೋರಿದ ಉತ್ತಮ
ಪ್ರದರ್ಶನವನ್ನು ಪರಿಗಣಿಸಿ ಉಳಿಸಿಕೊಳ್ಳಲಾಗಿದೆ ಎಂದು ಆಯ್ಕೆ
ಸಮಿತಿಯ ಅಧ್ಯಕ್ಷ ದಿಲೀಪ್ ವೆಂಗ್ಸರ್ಕಾರ್ ಹೇಳಿದ್ದಾರೆ.
ಡಿಸೆಂಬರ್ ೧೫ ರಿಂದ ಪ್ರಾರಂಭವಾಗುವ ಮೊದಲ ಟೆಸ್ಟ್ ಪಂದ್ಯಕ್ಕೆ
ಆರಿಸಲಾಗಿರುವ ತಂಡ ಹೀಗಿದೆ:
ರಾಹುಲ್ ದ್ರಾವಿಡ್ (ನಾಯಕ), ವಿವಿಎಸ್ ಲಕ್ಷ್ಮಣ್ (ಉಪ ನಾಯಕ),
ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಾಸಿಂ ಜಾಫರ್, ಗೌತಂ
ಗಂಭೀರ್, ವಿರೇಂದರ್ ಸೆಹ್ವಾಗ್, ಮಹೇಂದರ್ ಸಿಂಗ್ ಧೋನಿ (ವಿಕೆಟ್
ಕೀಪರ್), ದಿನೇಶ್ ಕಾರ್ತಿಕ್ (ವಿಕೇಟ್ ಕೀಪರ್), ಮುನಾಫ್ ಪಟೇಲ್,
ಜಹೀರ್ ಖಾನ್, ಶ್ರೀಶಾಂತ್, ವಿಕ್ರಂ ರಾಜವೀರ್ ಸಿಂಗ್, ಇರ್ಫಾನ್ ಪಠಾಣ್,
ಅನಿಲ್ ಕುಂಬ್ಳೆ ಮತ್ತು ಹರಭಜನ್ ಸಿಂಗ್.
ಇನ್ನಷ್ಟು
ವಿಟಿಯು: ಆನ್ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭ
ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|