|
ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ
ಮೈಸೂರು: ಜೆಡಿಸ್ ನಾಯಕರೂ, ಅರಣ್ಯ ಸಚಿವರೂ ಆದ
ಚೆನ್ನಿಗಪ್ಪ ಮತ್ತು ಅವರ ಚಾಲಕ ಇಬ್ಬರೂ ಸೇರಿ ಕರ್ತವ್ಯ ನಿರತ
ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿ ಕ್ಯಾಮೆರಾವನ್ನು ಕಿತ್ತು
ಕೊಂಡಿರುವ ಘಟನೆ ನಡೆದಿದೆ.
ಹಿನ್ನೆಲೆ: ಚಾಮುಂಡಿ ಬೆಟ್ಟದ ಹತ್ತಿರದ ಹಡಜನ ಕ್ರಾಸ್ ಬಳಿ ೧೨
ಕಾರುಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಬರುತ್ತಿದ್ದ ಸಚಿವ
ಚೆನ್ನಿಗಪ್ಪರನ್ನು ಚುನಾವಣಾ ವೀಕ್ಷಕರು ಈ ಕಾರುಗಳಿಗೆ ಪ್ರಚಾರದ
ಅನುಮತಿ ಇಲ್ಲದ ಕಾರಣ ತಡೆದು ನಿಲ್ಲಿಸಿದರು. ಚುನಾವಣಾ ವೀಕ್ಷಕರಿಗೆ
ಚೆನ್ನಿಗಪ್ಪ ಕೈ ಮುಗಿಯುತ್ತ `ನಿಯಮ ಉಲ್ಲಂಘಿಸಿದ್ದರೆ ದಯವಿಟ್ಟು
ಕ್ಷಮಿಸಿ' ಎಂದರು.
ಸ್ಥಳದಲ್ಲಿದ್ದ `ಮೈಸೂರು ಮಿತ್ರ' ಪತ್ರಿಕೆಯ ವರದಿಗಾರ ಈ
ದೃಶ್ಯವನ್ನು ಸೆರೆ ಹಿಡಿಯುತ್ತಿದ್ದಂತೆಯೇ ಚೆನ್ನಿಗಪ್ಪ
ಆಕ್ರೋಶದಿಂದ `ಹಿಡ್ಕೊಳ್ರಿ..ಆ..ಮಗನ್ನ' ಎಂದು ತಮ್ಮ ಆಪ್ತ
ಸಿಬ್ಬಂದಿಗಳಿಗೆ ಆಜ್ಞಾಪಿಸಿದರು. ಚೆನ್ನಿಗಪ್ಪ ಅವರ ಸಿಬ್ಬಂದಿಗಳು
ವರದಿಗಾರನ್ನು ಎಳೆದುಕೊಂಡು ಹೋಗುವಾಗ ವರದಿಗಾರನಿಗೆ ಅನೇಕ
ತರಚು ಗಾಯಗಳಾಗಿವೆ. ತನ್ನ ಕ್ಯಾಮೆರಾ ಮರಳಿ ನೀಡುವಂತೆ
ವರದಿಗಾರ ಕೇಳಿಕೊಂಡರೂ ಮರಳಿಸಲಿಲ್ಲ.
ದೇವೇಗೌಡ ಕ್ಷಮೆಯಾಚನೆ: ಜೆಡಿಸ್ ವಕ್ತಾರ ವೈ.ಎಸ್.ವಿ.
ದತ್ತಾ ಪತ್ರಿಕಾಗೋಷ್ಠಿ ಕರೆದು ಚೆನ್ನಿಗಪ್ಪ ಅವರ
ನಡುವಳಿಕೆಯನ್ನು ಸಮರ್ಥಿಸಲು ಪ್ರಯತ್ನಿಸಿದಾಗ ದೊಡ್ಡ
ಕೋಲಾಹಲವೇ ನಡೆಯಿತು. ಮುಖ್ಯಮಂತ್ರಿಗಳು ಕ್ರಮ
ಕೈಗೊಳ್ಳುವಂತೆ ಪತ್ರಕರ್ತರು ಒತ್ತಾಯಿಸಿದರು. ಜೆಡಿಎಸ್
ರಾಷ್ಟ್ರಾಧ್ಯಕ್ಷ ದೇವೇಗೌಡ ಪತ್ರಕರ್ತರನ್ನು
ಕ್ಷಮೆಯಾಚಿಸಿದ್ದಾರೆ. ಈ ನಡುವೆ ಚೆನ್ನಿಗಪ್ಪ `ಮೈಸೂರು ಮಿತ್ರ'
ಪತ್ರಿಕೆಯ ಸಂಪಾದಕರನ್ನು ಭೇಟಿಯಾಗಿ ಸಂಧಾನಕ್ಕೆ
ಯತ್ನಿಸಿದ್ದಾರೆ.
ಇನ್ನಷ್ಟು
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|