|
ಆದಿವಾಸಿ ಹಕ್ಕು ಮಸೂದೆ ಮಂಡನೆಗೆ ಒತ್ತಾಯ
ಬೆಂಗಳೂರು: ಈ ವರ್ಷದ ಚಳಿಗಾಲದ ಅಧಿವೇಶನದಲ್ಲಿ `ಆದಿವಾಸಿ
ಅರಣ್ಯ ಹಕ್ಕು ಮಸೂದೆ'ಯನ್ನು ಪಾಸು ಮಾಡಬೇಕು ಎಂದು
ಆಗ್ರಹಿಸಿ ಬುಧವಾರ ರಾಷ್ಟ್ರೀಯ ಆದಿವಾಸಿ ಆಂದೋಲನದ ಸದಸ್ಯರು
ಎಂ.ಜಿ. ರಸ್ತೆಯ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಧರಣಿ
ನಡೆಸಿದರು.
`ಕಾಡು ನಾಶ ತಡೆಹಿಡಿಯದ, ಸ್ವಾತಂತ್ರ್ಯದ ಪೂರ್ವದಲ್ಲಿ ಬ್ರಿಟಿಷರು
ಮಾಡಿದ ಕಾನೂನೇ ಇನ್ನೂ ಜಾರಿಯಲ್ಲಿದೆ. ಇತ್ತೀಚೆಗೆ ಕೇಂದ್ರ
ಸರ್ಕಾರದ `ವಿಶೇಷ ಆರ್ಥಿಕ ವಲಯ' ಯೋಜನೆಯಿಂದ
ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತಕ್ಕೆ ಅರಣ್ಯ ಭೂಮಿ ಸಿಲುಕುವ
ಸಾಧ್ಯತೆಯಿದೆ. ಇಂತಹ ಯೋಜನೆಗಳಿಂದ ಪರಿಸರ
ಹಾನಿಯಾಗುತ್ತದೆ' ಎಂದು ಆಂದೋಲನದ ಸದಸ್ಯರಲ್ಲೊಬ್ಬರಾದ
ಶಿವರಾಜೇಗೌಡ ಕಳವಳ ವ್ಯಕ್ತಪಡಿಸಿದರು.
`ಆದಿವಾಸಿಗಳ ಗ್ರಾಮ ಸಭೆಗಳಿಗೆ ಮಾನ್ಯತೆ ನೀಡಬೇಕು. ಆದಿವಾಸಿಗಳ
ಜೀವನಾಧಾರಕ್ಕೆ ಕೆಲವು ಅರಣ್ಯ ಉತ್ಪನ್ನಗಳನ್ನು ಬಳಸಲು ಅವಕಾಶ
ನೀಡಬೇಕು' ಎಂದು ಶಿವರಾಜೇಗೌಡ ಸರ್ಕಾರವನ್ನು ಒತ್ತಾಯಿಸಿದರು.
ಇನ್ನಷ್ಟು
ವಿಟಿಯು: ಆನ್ಲೈನ್ ಶಿಕ್ಷಣ ವ್ಯವಸ್ಥೆ ಪ್ರಾರಂಭ
ಪತ್ರಕರ್ತನ ಮೇಲೆ ಹಲ್ಲೆಮಾಡಿದ ಚೆನ್ನಿಗಪ್ಪ
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|