|
ಶಿಬು: ಮೊದಲ ಕೊಲೆಗಾರ ಕೇಂದ್ರ ಸಚಿವ
ನವದೆಹಲಿ: ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಶಿಬು ಸೊರೇನ್
ಮೇಲಿದ್ದ ಕಾರ್ಯದರ್ಶಿಯ ಕೊಲೆ ಆರೋಪ ಸಾಬೀತಾಗಿದೆ.
ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಕೇಂದ್ರ
ಸಚಿವರೊಬ್ಬರು ತಪ್ಪಿತಸ್ಥರೆಂದು ಸಾಬೀತಾಗಿ ರಾಜೀನಾಮೆ ನೀಡುತ್ತಿರುವ
ಪ್ರಸಂಗ ಇದೇ ಮೊದಲಬಾರಿಯಾಗಿದೆ.
೧೨ ವರ್ಷಗಳ ಹಿಂದೆ ಶಿಬು ಅವರ ಖಾಸಗಿ ಆಪ್ತ ಕಾರ್ಯದರ್ಶಿಯಾಗಿ
ಕೆಲಸ ಮಾಡಿದ ಶಶಿನಾಥ್ ಝಾ(೪೦) ಅವರನ್ನು ಅಪಹರಿಸಿ
ಹತ್ಯೆಗೈಯಲಾಗಿತ್ತು. ಈಗಾಗಲೇ ಪ್ರಕರಣದಲ್ಲಿ ಭಾಗಿಯಾದ
ಕಿಶೋರ್ ಮೆಹ್ತಾ, ಶೈಲೇಂದ್ರ ಭಟ್ಟಾಚಾರ್ಯ, ಪಶುಪತಿನಾಥ
ಮೆಹ್ತಾ ಮತ್ತು ಅಜಯ ಕುಮಾರ್ಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸುತ್ತಲೇ ಪ್ರಧಾನಿ
ಮನಮೋಹನ ಸಿಂಗ್ ಶಿಬು ಸೊರೇನ್ ಅವರ ರಾಜೀನಾಮೆ ಕೋರಿ
ಪಡೆದಿದ್ದಾರೆ.
೧೯೯೩ರಲ್ಲಿ ನರಸಿಂಹ ರಾವ್ ನೇತೃತ್ವದ ಸರ್ಕಾರವಿದ್ದಾಗ ಅವರ
ಸರ್ಕಾರಕ್ಕೆ ಬೆಂಬಲ ನೀಡುವ ಸಲುವಾಗಿ ಶಿಬು ಹಣಪಡೆದಿದ್ದನ್ನು ಝಾ
ತಿಳಿದಿದ್ದರು. ಆದ್ದರಿಂದ ಝಾ ಅವರ ಕೊಲೆಮಾಡಲಾಗಿತ್ತು ಎಂದು ಸಿಬಿಐ
ಆರೋಪಿಸಿತ್ತು.
ಇನ್ನಷ್ಟು
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|