|
ರೈತರ ಆತ್ಮಹತ್ಯೆ ತಡೆಗೆ ಪ್ಯಾಕೇಜ್ ಘೋಷಣೆ
ನವದೆಹಲಿ: ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ
ತಡೆಯಲು ಯೋಜನಾ ಆಯೋಗ ೬ ಸಾವಿರ ಕೋಟಿ ರೂಗಳ ಪ್ಯಾಕೇಜ್
ರೂಪಿಸುತ್ತಿದೆ.
ಡಿಸೆಂಬರ್ ೯ರಂದು ನಡೆಯಲಿರುವ ೧೧ನೇ ಪಂಚವಾರ್ಷಿಕ ಯೋಜನೆಗೆ
ಅನುಮೋದನೆ ನೀಡಲು ಸೇರುತ್ತಿರುವ ರಾಷ್ಟ್ರೀಯ ಅಭಿವೃದ್ಧಿ
ಮಂಡಳಿ (ಎನ್ಡಿಸಿ) ಸಭೆಯಲ್ಲಿ ಪ್ಯಾಕೇಜ್ನ್ನು ಪ್ರಕಟಿಸುವ
ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ
ಪ್ರಧಾನಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ
ರೈತರ ಆತ್ಮಹತ್ಯೆ ಪ್ರಕರಣಗಳು ಚರ್ಚೆಗೆ ಬರುವ ಸಂಭವವಿದೆ.
ರೈತರ ಬಗ್ಗೆ ಕಾಳಜಿ ಹೊಂದಿರುವ ಸರ್ಕಾರ ವಿಶೇಷವಾಗಿ ಸಣ್ಣ
ರೈತರಿಗೆ ನೆರವಾಗುವ ಯೋಜನೆಯನ್ನು ತಯಾರಿಸುತ್ತಿದೆ.
ರೈತರ ಆದಾಯದ ಮಟ್ಟವನ್ನು ಹೆಚ್ಚಿಸಲು ಬೇಸಾಯದ ಇತರ
ಕ್ಷೇತ್ರಗಳನ್ನೂ ಒಗ್ಗೂಡಿಸುವ ಬಗೆಗಿನ ಚಿಂತನೆ ನಡೆದಿದೆ. ಹಣಕಾಸು
ಯೋಜನಾ ಆಯೋಗ ಸಚಿವಾಲಯದೊಂದಿಗೆ ಹಲವು ಸುತ್ತಿನ
ಮಾತುಕತೆ ನಡೆಸಿ ಹಣ ನೀಡಿಕೆಯ ಭರವಸೆ ಪಡೆದಿದೆ ಎಂದು
ಮೂಲಗಳಿಂದ ತಿಳಿದು ಬಂದಿದೆ.
ಇನ್ನಷ್ಟು
ನಾಡೋಜ ಪ್ರಶಸ್ತಿಗೆ ೫
ಜನರ ಆಯ್ಕೆ
೬೦ ಸಾವಿರ ಕ್ವಿ. ಅಡಿಕೆ ಖರೀದಿ :
ಅಡಿಕೆ ಮಂಡಳ
ಎಫ್೧:ಅಲ್ಸಾನೋಗೆ ಹೊಸ
ಜೋಡಿ ಹ್ಯಾಮಿಲ್ಟನ್
ಭಾರತಕ್ಕೆ ಲಗ್ಗೆ
ಇಡಲಿರುವ ಅಲ್ಜಜೀರಾ ಚಾನೆಲ್
ಫೈರ್ ಫಾಕ್ಸ್ ಹ್ಯಾಕರ್ಸ್
ಪಾಲಿಗೆ ಸುಲಭ ತುತ್ತು?
ವಿದ್ಯುತ್ ದರ ಇಳಿಸಲು
`ಅಂಚೆ ಕಾರ್ಡ್ ಚಳುವಳಿ'
ಮುಂಬೈನಲ್ಲಿ ಡೀಸೆಲ್ ಬೆಲೆ
ಕಮ್ಮಿ?
|