Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 27 November 2006 06:16 PM

ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸಹಕಾರಿ ಸಂಸ್ಥೆ

 

ದಾವಣಗೆರೆ: ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ರಾಜ್ಯ ಸರ್ಕಾರವು `ಸಕ್ಕರೆ ಕಾರ್ಖಾನೆ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು' ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಪ್ರೊ.ಸಿ. ನರಸಿಂಹಪ್ಪ ಆಗ್ರಹಿಸಿದ್ದಾರೆ.
 

ಪತ್ರಕರ್ತರ ಜೊತೆ ಮಾತನಾಡುತ್ತ `ಉತ್ತರ ಪ್ರದೇಶದ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ನಿಗಮ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಅದರಂತೆ ರಾಜ್ಯದಲ್ಲೂ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು' ಎಂದು ಹೇಳಿದರು.
 

`ರಾಷ್ಟ್ರದಾದ್ಯಂತ ೫೨೭ ಸಕ್ಕರೆ ಕಾರ್ಖಾನೆಗಳಿವೆ. ಇವುಗಳಲ್ಲಿ ಸುಮಾರು ಶೇ.೯೦ರಷ್ಟು ಖಾಸಗೀ ವಲಯದಲ್ಲಿದೆ. ಮಹಾರಾಷ್ಟ್ರದಲ್ಲಿ ಶೇ. ೯೯ರಷ್ಟು ಸಕ್ಕರೆ ಕಾರ್ಖಾನೆಗಳು ಸಹಕಾರಿ ವಲಯದಲ್ಲಿದೆ. ಕರ್ನಾಟಕದಲ್ಲಿ ಶೇ.೫೦ ಸಕ್ಕರೆ ಕಾರ್ಖಾನೆಗಳು ಸಹಕಾರಿವಲಯದಲ್ಲಿದ್ದು ಮುಚ್ಚುವ ಭೀತಿಯಲ್ಲಿವೆ. ಈ ರೋಗಪೀಡಿತ ಕಾರ್ಖಾನೆಗಳ ಪುನಶ್ಚೇತನಕ್ಕಾಗಿ ಟೆಂಡರ್‌ನ್ನು ಕರೆಯಲಾಗಿತ್ತಾದರೂ ಯೋಗ್ಯ ಪ್ರತಿಕ್ರಿಯೆ ದೊರೆಯಲಿಲ್ಲ' ಎಂದು ನರಸಿಂಹಪ್ಪ ವಿವರಿಸಿದರು.
 

`ರಾಜ್ಯ ಸರ್ಕಾರ ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳ ಆರ್ಥಿಕ ವರದಿಗಳನ್ನು ತಯಾರಿಸಿ ನಾಬಾರ್ಡ್‌ಗೆ ಸಲ್ಲಿಸಬೇಕು. ಖಾಸಗೀಕರಣದಿಂದ ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಸಹಕಾರಿ ವ್ಯವಸ್ಥೆಯನ್ನು ಜಾರಿ ತರುವುದರಿಂದ ಮತ್ತೆ ಜೀವ ನೀಡಬಹುದು' ಎಂದು ನರಸಿಂಹಪ್ಪ ಅಭಿಪ್ರಾಯ ಪಟ್ಟರು.

 

ಇನ್ನಷ್ಟು

ಆಳ್ವಾಸ್ ನುಡಿಸಿರಿ- ೨೦೦೬

ನಾಡೋಜ ಪ್ರಶಸ್ತಿಗೆ ೫ ಜನರ ಆಯ್ಕೆ

೬೦ ಸಾವಿರ ಕ್ವಿ. ಅಡಿಕೆ ಖರೀದಿ : ಅಡಿಕೆ ಮಂಡಳ

ಎಫ್೧:ಅಲ್ಸಾನೋಗೆ ಹೊಸ ಜೋಡಿ ಹ್ಯಾಮಿಲ್ಟನ್

ಭಾರತಕ್ಕೆ ಲಗ್ಗೆ ಇಡಲಿರುವ ಅಲ್‌ಜಜೀರಾ ಚಾನೆಲ್

ಫೈರ್ ಫಾಕ್ಸ್ ಹ್ಯಾಕರ್‍ಸ್ ಪಾಲಿಗೆ ಸುಲಭ ತುತ್ತು?

ವಿದ್ಯುತ್ ದರ ಇಳಿಸಲು `ಅಂಚೆ ಕಾರ್ಡ್ ಚಳುವಳಿ'

ಮುಂಬೈನಲ್ಲಿ ಡೀಸೆಲ್ ಬೆಲೆ ಕಮ್ಮಿ?

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com