|
೬೦ ಸಾವಿರ ಕ್ವಿ. ಅಡಿಕೆ ಖರೀದಿ : ಅಡಿಕೆ ಮಂಡಳ
ಶಿವಮೊಗ್ಗ: ಅಡಿಕೆ ಖರೀದಿಗೆಂದೇ ಹುಟ್ಟು ಹಾಕಲಾದ `ಕರ್ನಾಟಕ
ರಾಜ್ಯ ಅಡಿಕೆ ಮಾರಾಟ ಸಹಕಾರ ಮಂಡಳಿ' ಈ ಆರ್ಥಿಕ ವರ್ಷದಲ್ಲಿ ೬೦
ಸಾವಿರ ಕ್ವಿಂಟಾಲ್ ಅಡಿಕೆ ಖರೀದಿ ಮಾಡುವ ಗುರಿಯನ್ನು ಹೊಂದಿದೆ ಎಂದು
ಅಧ್ಯಕ್ಷ ಶಾಂತಾರಾಮ ಹೆಗಡೆ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಮಂಡಳದ ಮೊದಲ ಸಭೆಯ ನಂತರ
ಸುದ್ದಿಗಾರರೊಂದಿಗೆ ಮಾತನಾಡಿದ ಹೆಗಡೆಯವರು ಈ ವಿಷಯ
ತಿಳಿಸಿದರು. ಭದ್ರಾವತಿ, ಶಿವಮೊಗ್ಗ, ಬೀರೂರು, ಕೊಪ್ಪ, ಶೃಂಗೇರಿ,
ನರಸಿಂಹರಾಜಪುರ, ತರೀಕೆರೆ, ಸಾಗರ, ಹೊಸನಗರ, ತೀರ್ಥಹಳ್ಳಿ,
ದಾವಣಗೆರೆ, ಚೆನ್ನಗಿರಿ, ಹೊನ್ನಳ್ಳಿ, ಶಿರಸಿ, ಸಿದ್ದಾಪುರ, ಯಲ್ಲಾಪುರ,
ಮಂಗಳೂರುಗಳಲ್ಲಿ ಮಂಡಳಿಯ ಶಾಖೆ ತೆರೆಲಾಗುವುದು.
ಸುಮಾರು ಶೇ.೪೦ರಷ್ಟು ಅಡಿಕೆ ಬೆಳೆಯನ್ನು ಸಹಕಾರಿ ಸಂಘಗಳ
ಮೂಲಕವೇ ಖರೀದಿ ಮಾಡಲಾಗುತ್ತಿದೆ. ಅಡಿಕೆ ಬೆಳೆಯನ್ನು
ಸಂಪೂರ್ಣವಾಗಿ ಸಹಕಾರಿ ಸಂಘಗಳ ಮೂಲಕವೇ ಖರೀದಿ ಮಾಡಲು
ಪ್ರಯತ್ನಿಸಲಾಗುವುದು. ರಾಜ್ಯದಲ್ಲಷ್ಟೇ ಅಲ್ಲದೆ ಹೊರ
ರಾಜ್ಯಗಳಲ್ಲಿಯೂ ಮಂಡಳಿ ಅಡಿಕೆ ಖರೀದಿ ಮಾಡಲಿದೆ. ಅಡಿಕೆ ಮಂಡಳಿ
ಶೇರುಗಳ ಮುಖಾಂತರ ೧.೫ ಕೋಟಿ ರೂ. ಸಂಗ್ರಹಿಸಿದೆ. ಒಟ್ಟೂ ೫೦
ಕೋಟಿ ರೂ. ಠೇವಣಿಯ ರೂಪದಲ್ಲಿ ಸಂಗ್ರಹಿಸಲಾಗುವುದು ಎಂದು
ಶಾಂತಾರಾಮ ಹೆಗಡೆ ವಿವರಿಸಿದರು.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|