|
ಉಪಗ್ರಹ ಸಂರಕ್ಷಣೆಗೆ ವಿಮೆ: ಮಾಧವನ್ ನಾಯರ್
ಬೆಂಗಳೂರು: ಭಾರತದಿಂದ ಉಡಾವಣೆಗೊಳ್ಳುವ
ಉಪಗ್ರಹಗಳಿಗೆ ವಿಮಾ ವ್ಯವಸ್ಥೆ ಮಾಡಿದರೆ ಚೆನ್ನ ಎಂದು
ಭಾರತೀಯ ಅಂತರಿಕ್ಷ ಸಂಶೋಧನ ಕೇಂದ್ರದ ಅಧ್ಯಕ್ಷ ಜಿ.
ಮಾಧವನ್ ನಾಯರ್ ಹೇಳಿದ್ದಾರೆ.
ರಾಷ್ಟ್ರೀಯ ವಿಮಾ ಕಂಪೆನಿ ಲಿಮಿಟೆಡ್ ಆಯೋಜಿಸಿದ್ದ ಗ್ರಾಹಕರ
ಮೇಳವನ್ನು ಉದ್ಘಾಟಿಸಿ ಮಾತನಾಡಿದ ಮಾಧವನ್ ನಾಯರ್
`ಉಪಗ್ರಹಗಳ ಉಡಾವಣೆ ವೈಫಲ್ಯ ಹೆಚ್ಚಾಗುತ್ತಿರುವುದರಿಂದ
ಉಪಗ್ರಹಗಳಿಗೆ ವಿಮಾ ಸೌಲಭ್ಯವನ್ನು ಒದಗಿಸಲು ವಿಮಾ ಕಂಪೆನಿಗಳು
ಮುಂದಾಗಬೇಕು. ಮುಂಬರುವ ವರ್ಷಗಳಲ್ಲಿ ೪ ರಿಂದ ೬
ಉಪಗ್ರಹವನ್ನು ಉಡಾವಣೆ ಮಾಡಲಿರುವುದರಿಂದ ವಿಮಾ ಸೌಲಭ್ಯದ
ಅಗತ್ಯತೆಯ ಹೆಚ್ಚು ಪ್ರಸ್ತುತ ಎನಿಸಿದೆ' ಎಂದು ಇಸ್ರೋ
ಅಧ್ಯಕ್ಷರು ಹೇಳಿದರು.
ಇತ್ತೀಚಿನ ಜಿಎಸ್ಎಲ್ವಿ ವೈಫಲ್ಯದ ನಂತರ ವಿಮೆ ಮಾಡಿಸುವುದರ
ಬಗ್ಗೆ ಚಿಂತನೆ ನಡೆದಿದೆ. ಆದರೆ ಭಾರತದಲ್ಲಿ ಈ ವರೆಗೂ ಅಗಿರುವ
ಉಡಾವಣಾ ವೈಫಲ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ತುಲನೆ ಮಾಡಿದರೆ
ಶೇ. ೧೦ ರಷ್ಟು ಮಾತ್ರ ಎಂದು ಹೇಳಬಹುದು.
ಇದೇ ಸಂದರ್ಭದಲ್ಲಿ ಕೋರಮಂಗಲ ಹಾಗೂ ಇಂಟರ್ ನ್ಯಾಷನಲ್ ಟೆಕ್
ಪಾರ್ಕ್ನಲ್ಲಿರುವ ರಾಷ್ಟ್ರೀಯ ವಿಮಾ ಸಂಸ್ಥೆಯ ವಿಭಾಗದ
ವ್ಯವಸ್ಥಾಪಕರು ಐಎಸ್ಓ ೯೦೦೧:೨೦೦೦ ಪ್ರಮಾಣ ಪತ್ರವನ್ನು
ನಾಯರ್ ಅವರಿಂದ ಪಡೆದರು.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|