|
ಲಾಲೂ ವಿರುದ್ಧ ರಿಸರ್ವ್ ಬ್ಯಾಂಕ್ ಮೊಕದ್ದಮೆ
ನವದೆಹಲಿ: ಭಾರತದ ನಾಣ್ಯವನ್ನು(ಕರೆನ್ಸಿ) ದುರ್ಬಳಕೆ
ಮಾಡಿದರೆಂದು ಕೇಂದ್ರ ರೈಲ್ವೇ ಮಂತ್ರಿ ಲಾಲೂ ಪ್ರಸಾದ್ ಅವರ
ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ)ನ ಮುಖ್ಯಸ್ಥ ವೈ.ವಿ.
ರೆಡ್ಡಿ ಮೊಕದ್ದಮೆ ಹೂಡಿದ್ದಾರೆ.

ಹೊಸದಾಗಿ ಚಲಾವಣೆಗೆ ಬಂದಿರುವ ಎರಡು ರೂಪಾಯಿ ನಾಣ್ಯದಲ್ಲಿ ಲಾಟೀನು
ಹಿಡಿದಿರುವ ಗಣಪತಿಯ ಆಕೃತಿ ಇದೆ. ಭಾರತೀಯ ರೈಲ್ವೇಗೆ ೧೫೦
ವರ್ಷ ಸಂದ ನೆನಪಿಗಾಗಿ ಈ ನಾಣ್ಯವನ್ನು ಬಿಡುಗಡೆ ಮಾಡಲಾಯಿತು.
ಆದರೆ ಲಾಲೂ ಅವರ ರಾಷ್ಟ್ರೀಯ ಜನತಾದಳದ ಚುನಾವಣೆ ಚಿಹ್ನೆ
`ಲಾಟೀನು' ಆಗಿರುವುದು ಇಲ್ಲಿ ಗಮನಾರ್ಹ ಅಂಶ.
`ಇದು ನಾಣ್ಯದ ದುರ್ಬಳಕೆ ಅಷ್ಟೇ ಅಲ್ಲಾ, ಜನರ ಧಾರ್ಮಿಕ
ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ' ಎಂದು ದಾವೆದಾರರ
ಪರವಾಗಿ ಮಾತನಾಡಿದ ಸುಶೀಲ್ ಕುಮಾರ್ ಶ್ರೀವಾಸ್ತವ್ ಹೇಳಿದ್ದಾರೆ.
ಮೊಕದ್ದಮೆಯ ವಿಚಾರಣೆಯನ್ನು ನ್ಯಾಯಮೂರ್ತಿ ದೀಪಕ್ ಬನ್ಸಾಲ್
ಡಿಸೆಂಬರ್ ೧ ನೇ ತಾರೀಖಿಗೆ ಮುಂದೂಡಿದ್ದಾರೆ.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|