|
ಭದ್ರಾ ಮೇಲ್ದಂಡೆ ಯೋಜನೆಗೆ ತಜ್ಞರ ಸಲಹೆ
ಬೆಂಗಳೂರು: `ಭದ್ರಾ ಮೇಲ್ದಂಡೆ ಯೋಜನೆಯನ್ನು ಜಾರಿಗೆ
ತರಲು ಸರ್ಕಾರಕ್ಕೆ ಯಾವುದೆ ಅಡೆತಡೆಗಳಿಲ್ಲ. ಆದರೆ ಪದೆ ಪದೆ
ಒಡೆಯುತ್ತಿರುವ ನಾಲೆಗಳಿಗೆ ಪರ್ಯಾಯ ನಾಲೆ ನಿರ್ಮಿಸುವುದೋ
ಅಥವಾ ಅದನ್ನೇ ದುರಸ್ತಿ ಮಾಡಬೇಕೋ ಎನ್ನುವ ಬಗ್ಗೆ ತಜ್ಞರ
ಸಲಹೆ ಪಡೆದು ಅದರ ಪ್ರಕಾರವೇ ನಡೆಯಲಾಗುವುದು' ಎಂದು
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ
ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಸೂಕ್ತ ಅನುಷ್ಠಾನಕ್ಕೆ ಚಿತ್ರದುರ್ಗ,
ಕೋಲಾರ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗಳ
ನೀರು ಪೂರೈಕೆ ಯೋಜನೆಗೆ ಸಮೀಕ್ಷೆಯಿಂದ ಹಿಡಿದು ಎಲ್ಲ ಸಿದ್ಧತೆ
ಆಗಬೇಕಿದೆ.
`ಈ ಎರಡೂ ಯೋಜನೆಗಳನ್ನು ಒಂದೇ ಪ್ಯಾಕೇಜಿಗೆ ಸೇರಿಸಬೇಕೆ ಅಥವಾ
ಬೇರೆ ಬೇರೆಯಾಗಿ ಮಾಡಬೇಕೆ ಎನ್ನುವುದರ ಬಗ್ಗೆ
ಚರ್ಚೆನಡೆಯುತ್ತಿದೆ. ಯೋಜನೆಯ ಅನುಷ್ಠಾನಕ್ಕೆ ಸಚಿವ ಸಂಪುಟ
ಒಪ್ಪಿಗೆ ನೀಡಿದೆ. ಇನ್ನು ಯೋಜನೆಯ ಪ್ರಾರಂಭಿಸುವುದು ಮಾತ್ರ
ಬಾಕಿ ಇದೆ' ಎಂದು ಗೋಷ್ಠಿಯಲ್ಲಿ ಈಶ್ವರಪ್ಪ ಹೇಳಿದರು.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|