|
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಬಾಲಸೋರ್, ಒರಿಸ್ಸಾ: ನೆಲದಿಂದ ನೆಲಕ್ಕೆ ಹಾರುವ `ಪೃಥ್ವಿ-೨'
ಕ್ಷಿಪಣಿಯನ್ನು ಭಾನುವಾರ ಒರಿಸ್ಸಾದ ಚಾಂದಿಪುರದಲ್ಲಿರುವ ರಕ್ಷಣಾ
ನೆಲೆಯಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ಅಣ್ವಸ್ತ್ರ ಸಾಮರ್ಥ್ಯದ ಈ ಕ್ಷಿಪಣಿಯನ್ನು ಬೆಳಗ್ಗೆ ೯.೫೫ಕ್ಕೆ ಸಂಚಾರಿ
ಉಡಾವಕದ ಮೂಲಕ ಉಡಾಯಿಸಲಾಯಿತು. `ಪೃಥ್ವಿ-೨'ರ ಯೋಜನಾ
ನಿರ್ದೇಶಕ ವಿ. ಸಾರಸ್ವತ್, ಹೈದರಾಬಾದ್ನ ರಕ್ಷಣಾ ಸಂಶೋಧನೆ
ಮತ್ತು ಅಭಿವೃದ್ಧಿ ಪ್ರಯೋಗಾಲಯದ ನಿರ್ದೇಶಕ ಡಾ. ಪ್ರಹ್ಲಾದ್
ಸೇರಿದಂತೆ ರಕ್ಷಣಾ ಖಾತೆಯ ಹಲವು ಅಧಿಕಾರಿಗಳು `ಪೃಥ್ವಿ-೨' ರ
ಉಡಾವಣೆಯನ್ನು ವೀಕ್ಷಿಸಿದರು.
ಯುದ್ಧ ಭೂಮಿಯಲ್ಲಿ ಶತ್ರುಗಳ ವಿರುದ್ಧ ಪ್ರಯೋಗಿಸಲೆಂದೇ
ವಿಶೇಷವಾಗಿ ಈ ಕ್ಷಿಪಣಿಯನ್ನು ರೂಪಿಸಲಾಗಿದೆ. `ಪೃಥ್ವಿ-೨' ೨೫೦ ರಿಂದ
೩೫೦ ಕಿ.ಮೀ ದೂರದ ವರೆಗಿನ ಗುರಿಯನ್ನು ಕ್ರಮಿಸುವ
ಸಾಮರ್ಥ್ಯವನ್ನು ಹೊಂದಿದೆ.
ಡಿಆರ್ಡಿಒ ಏಕೀಕೃತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದ ಅಡಿ
ನಿರ್ಮಿಸಲಾದ ೫ ಕ್ಷಿಪಣಿಗಳಲ್ಲಿ `ಪೃಥ್ವಿ-೨' ಒಂದಾಗಿದ್ದು, ೧೯೯೬ರ
ಜನೆವರಿಯಲ್ಲಿ ಇದನ್ನು ಮೊದಲಬಾರಿಗೆ ಪರೀಕ್ಷಿಸಲಾಗಿತ್ತು.
ಇನ್ನಷ್ಟು
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
ಭದ್ರಾವತಿಯಲ್ಲಿ ರಕ್ಷಣಾ ವೇದಿಕೆ ಘಟಕ: ನಾರಾಯಣಗೌಡ
ಪದವಿಪೂರ್ವ ಪರೀಕ್ಷೆ ವೇಳಾಪಟ್ಟಿ ಪ್ರಕಟ
ರಾಜಿ ಸಂಧಾನಕ್ಕೆ ಒಪ್ಪಿದಿದ್ದರೆ ಗುಂಡಿಕ್ಕಿ:ಸಿಯಾಲ್ ಆದೇಶ
ನವೆಂಬರ್ ೧೯ರಂದು ಸಿಎಟಿ ಪರೀಕ್ಷೆ
ಹತ್ತು ಔಷಧಗಳ
ಮಾರಾಟ ನಿಷೇಧ
ಸಾಕ್ಷಿ ನೀಡಿ ನಂತರ ಆರೋಪಿಸಿ : ಡಿಕೇಶಿ
|