|
ಮಹಾರಾಷ್ಟ್ರಕ್ಕೆ ಛೀಮಾರಿ: ರಾಜ್ಯಕ್ಕೆ ಕೇಂದ್ರದ ಬೆಂಬಲ
ನವದೆಹಲಿ: ಮಹಾಜನ್ ವರದಿಯೇ ಅಂತಿಮವೆಂದು
ಸುಪ್ರೀಂಕೋರ್ಟ್ಗೆ ಕೇಂದ್ರಸರ್ಕಾರವು ಪ್ರಮಾಣ ಪತ್ರ ನೀಡಿದ
ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ತೀವ್ರ ಮುಖಭಂಗ
ಅನುಭವಿಸಿದೆ.
ಬೆಳಗಾವಿ ಹಾಗೂ ಇನ್ನುಳಿದ ಮರಾಠಿ ಭಾಷಿಗರ ಗಡಿ ಭಾಗಗಳು
ಮಹಾರಾಷ್ಟ್ರಕ್ಕೆ ಸೇರಬೇಕೆಂದು ಮಹಾರಾಷ್ಟ್ರ ಸರ್ಕಾರ ಮಾಡಿದ
ಮನವಿಯನ್ನು ಕೇಂದ್ರ ಸರ್ಕಾರ ಬಲವಾಗಿ ತಳ್ಳಿ ಹಾಕಿದೆ.
೧೯೫೬ರಲ್ಲಿ ನಡೆದ ರಾಜ್ಯಗಳ ಮರುವಿಂಗಡಣೆ ಸಮರ್ಪಕ ಮತ್ತು
ರಾಜ್ಯಗಳ ವಿಂಗಡಣೆಯಲ್ಲಿ ಯಾವುದೇ ತಪ್ಪು ನಡೆದಿಲ್ಲ.
ಯಾವುದೇ ನಿರ್ದಿಷ್ಟ ಪ್ರದೇಶವನ್ನು ರಾಜ್ಯವೊಂದಕ್ಕೆ ಸೇರ್ಪಡೆ
ಮಾಡುವಾಗ ಭಾಷೆ ಜೊತೆಗೆ ಇನ್ನಿತರ ಹಲವು ಅಂಶಗಳನ್ನೂ
ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ರಾಜ್ಯಗಳ
ಪುನರ್ವಿಂಗಡಣೆ ಸಂದರ್ಭದಲ್ಲಿ ಈ ಅಂಶಗಳನ್ನು ಪರಿಗಣಿಸಿಯೇ
ಸಂಸತ್ತು ರಾಜ್ಯ ಪುನರ್ವಿಂಗಡಾ ಕಾಯಿದೆಯನ್ನು ೧೯೫೬ರಲ್ಲಿ
ಅಂಗೀಕರಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಏನೇ ವಿವಾದವಿದ್ದರೂ ಎರಡು ರಾಜ್ಯಗಳು ಪರಸ್ಪರ ಮಾತುಕತೆ
ಮೂಲಕ ಬಗೆಹರಿಸಿಕೊಳ್ಳುವುದೇ ಸೂಕ್ತ ಎಂದು ಪ್ರಮಾಣಪತ್ರದಲ್ಲಿ
ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ಇನ್ನಷ್ಟು
ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಜಪಾನ್ನಲ್ಲಿ ಮತ್ತೆ ಸುನಾಮಿ ಭಯ
ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ
ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ
ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ
ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ
ಸಚಿನ್-ಕಾಂಬ್ಳಿ ದಾಖಲೆ ಧ್ವಂಸ
|