|
ನಕ್ಸಲ್ ಜೊತೆ ಪೊಲೀಸ್ ಗುಂಡಿನ ಚಕಮಕಿ
ಕುಂದಾಪುರ: ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ್
ಬಾಗಿಮನೆ ಗ್ರಾಮದ ದಾಸಿಕಾನು ಎಂಬಲ್ಲಿ ಗುರುವಾರ ಮುಂಜಾನೆ
ನಕ್ಸಲೀಯರ ತಂಡ ಪೊಲೀಸ್ ತಂಡಗಳ ಮಧ್ಯೆ ಪರಸ್ಪರ ಗುಂಡಿನ
ಕಾಳಗ ನಡೆಯಿತು.
ದಾಸಿಕಾನು-ಇರಿಕೆಗದ್ದೆ ಅರಣ್ಯವ್ಯಾಪ್ತಿಯಲ್ಲಿ ಮುಂಜಾನೆ ಸುಮಾರು
೬.೪೫ ರಿಂದ ೭ ಗಂಟೆಯ ಹೊತ್ತಿಗೆ ನಕ್ಸಲರು ಹಾಗೂ ಎ.ಎನ್.ಎಫ್
ಕಾರ್ಯಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ದಾಸಿಕಾನು
ಅಣ್ಣಯ್ಯ ನಾಯ್ಕ ಎಂಬವರ ಮನೆಯಿಂದ ಹೊರಬಿದ್ದ ೩
ಯುವಕರು, ಒಬ್ಬ ಯುವತಿಯ ನಕ್ಸಲ್ ತಂಡ ಪೊಲೀಸರನ್ನು
ಕಂಡೊಡನೆ ಗುಂಡಿನ ಸುರಿಮಳೆಗೆರೆದಿದೆ.
`ಗುಂಡು ಹಾರಾಟದ ಸ್ಥಳದಲ್ಲಿ ೧ ಟಾರ್ಚ್ ಮತ್ತು ಒಂದು
ಕರವಸ್ತ್ರಗಳು ಸಿಕ್ಕಿದೆ. ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಈ
ಪ್ರದೇಶದ ಎಲ್ಲಾ ಠಾಣೆಗಳಿಗೆ ಸೂಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಎಸ್ಪಿ
ಸುಭಾಶ್ ಗುಡಿಮನಿ ನೇತೃತ್ವದ ನಕ್ಸಲ್ ನಿಗ್ರಹ ಪಡೆ ಪೂರ್ಣ
ಪ್ರಮಾಣದ ಕಾರ್ಯ ನಡೆಸುತ್ತಿದೆ' ಎಂದು ಎಸೈ ಸುರೇಶ್
ಕುಮಾರ್ ಹೇಳಿದ್ದಾರೆ.
ಇನ್ನಷ್ಟು
ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಜಪಾನ್ನಲ್ಲಿ ಮತ್ತೆ ಸುನಾಮಿ ಭಯ
ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ
ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ
ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ
ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ
ಸಚಿನ್-ಕಾಂಬ್ಳಿ ದಾಖಲೆ ಧ್ವಂಸ
|