|
ಮಾಸ್ಟರ್ ಕಿಶನ್ಗೆ ಕರುಣಾನಿಧಿಯ ಪ್ರಶಂಸೆ
ಚೆನ್ನೈ: ಕಿರಿಯ ವಯಸ್ಸಿನ ನಿರ್ದೇಶಕ ಮಾಸ್ಟರ್
ಕಿಶನ್ರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ತಮಿಳುನಾಡಿನ
ಮುಖ್ಯಮಂತ್ರಿ ಎಂ. ಕರುಣಾನಿಧಿ ಅಭಿನಂದನೆಯ ಮಳೆಗೆರೆದಿದ್ದಾರೆ.

ಕುಟುಂಬದೊಡನೆ ಕರುಣಾನಿಧಿಯವರನ್ನು ಭೇಟಿ ಮಾಡಿದ ಕಿಶನ್,
ಕರುಣಾನಿಧಿಯವರೊಡನೆ ಮುಕ್ಕಾಲು ಗಂಟೆಗಳ ಕಾಲ ಮಾತುಕತೆ
ನಡೆಸಿದರು. ತಮ್ಮ ಕುಟುಂಬದ ಸದಸ್ಯರನ್ನು
ಕರುಣಾನಿಧಿಯವರು ಕಿಶನ್ಗೆ ಪರಿಚಯ ಮಾಡಿಕೊಟ್ಟರು.
ಚಿತ್ರೀಕರಣದ ಬಗ್ಗೆ ಮಾಹಿತಿಯನ್ನು ಕೇಳಿದ ಕರುಣಾನಿಧಿಯವರು
`ನೀನು ಭಾಗ್ಯರಾಜ, ಭಾರತಿರಾಜ ಅವರಿಗಿಂತ ದೊಡ್ಡ
ನಿರ್ದೇಶಕನಾಗಬೇಕು' ಎಂದು ಹಾರೈಸಿದರು. ತಮಿಳಿನಲ್ಲೂ ಕಿಶನ್
ನಿರ್ದೇಶನದ `ಕೇರಾಫ್ ಫುಟ್ಪಾತ್' ಚಿತ್ರ ನಿರ್ಮಿಸಲಾಗುವುದು
ಎಂದು ಕಿಶನ್ ತಂದೆ ಶ್ರೀಕಾಂತ್ ಹೇಳಿದರು.
ತಮಿಳಿನಲ್ಲಿ ಸ್ವತಂತ್ರವಾಗಿ ಚಿತ್ರ ನಿರ್ದೇಶನ ಮಾಡಬೇಕೆಂದು
ಕಿಶನ್ನನ್ನು ಕರುಣಾನಿಧಿ ಕೇಳಿಕೊಂಡರು. ತನ್ನ ಚಿತ್ರದ ಮೊದಲ
ಪ್ರದರ್ಶನಕ್ಕೆ ಬರುವಂತೆ ಕರುಣಾನಿಧಿಯವರಿಗೂ ಕಿಶನ್ ಆಹ್ವಾನ
ನೀಡಿದರಂತೆ.
ಇನ್ನಷ್ಟು
ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಜಪಾನ್ನಲ್ಲಿ ಮತ್ತೆ ಸುನಾಮಿ ಭಯ
ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ
ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ
ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ
ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ
ಸಚಿನ್-ಕಾಂಬ್ಳಿ ದಾಖಲೆ ಧ್ವಂಸ
|