|
ಅಡೋಬ್ ಸಿಇಓ ಮಗ ಅನಂತ್ ಪಾರು
ನವದೆಹಲಿ: ಮಗನ ಅಪಹರಣವಾಗಿ ಐದು ದಿನಗಳಿಂದ
ಕಳವಳಕ್ಕೊಳಗಾಗಿದ್ದ ಅಡೋಬ್ ಮುಖ್ಯ ಕಾರ್ಯನಿರ್ವಾಹಣ
ಅಧಿಕಾರಿ(ಸಿಇಓ) ನರೇಶ್ ಗುಪ್ತ ನಿಟ್ಟುಸಿರು ಬಿಟ್ಟಿದ್ದಾರೆ.
ನೋಯಿಡಾ-ಬುಲಂದ್ಸರ್ ಗಡಿ ಭಾಗದಲ್ಲಿದ್ದ ನರೇಶ್ ಗುಪ್ತ ಅವರ
ಮಗ ಅನಂತ್ ಗುಪ್ತನನ್ನು ದೆಹಲಿ ಪೊಲೀಸರು ಸುರಕ್ಷಿತವಾಗಿ
ಪಾರುಮಾಡಿದ್ದಾರೆ.
ನವೆಂಬರ್ ೧೩ ರಂದು ಶಾಲೆಗೆ ಹೊರಟಿದ್ದ ೩ ವರ್ಷದ ಅನಂತ್ನನ್ನು
ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪಹರಿಸಿದ್ದರು.
ಚಂಬಲ್ ಕಣಿವೆಯ ಉಗ್ರರ ಕೈಗೆ ಅಪಹರಣಕಾರರು ಮಗುವನ್ನು
ಕೊಟ್ಟಿದ್ದರು ಹಾಗೂ ಮಗುವಿನ ಬಿಡುಗಡೆಗೆ ೨ ಕೋಟಿ ನೀಡಬೇಕೆಂದು
ಒತ್ತಾಯಿಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದರು.
ಆದರೆ ಚಂಬಲ್ನ ಡಕಾಯಿತ ಜಗಜೀವನ ಪರಿಹಾರ್ ಗ್ಯಾಂಗ್ ಮಾಡಿದ
ಕೃತ್ಯ ಇದು ಎಂದು ಇನ್ನೂ ಖಚಿತವಾಗಿಲ್ಲ. ಎಂದು ಉತ್ತರಪ್ರದೇಶದ
ಎಸ್.ಟಿ.ಎಫ್ ಮುಖ್ಯಸ್ಥ ಎಸ್.ಕೆ. ಭಗತ್ ಹೇಳಿದ್ದಾರೆ.
ಇನ್ನಷ್ಟು
ಡೆನ್ಮಾರ್ಕ್ ಕಂಪೆನಿ ಜೊತೆ ಜೆಕೆ ಸಿಮೆಂಟ್ಸ್ ಒಪ್ಪಂದ
ಕೆಎಎಸ್ ಮುಖ್ಯ ಪರೀಕ್ಷೆ ವೇಳಾ ಪಟ್ಟಿ ಪ್ರಕಟ
ಜಪಾನ್ನಲ್ಲಿ ಮತ್ತೆ ಸುನಾಮಿ ಭಯ
ಬೆಂಗಳೂರಿನಲ್ಲಿ ಕನಕದಾಸರ ಜಯಂತಿ ಆಚರಣೆ
ಅಡಕೆ ಖರೀದಿಯತ್ತ ಸಜ್ಜಾದ ಮಾರಾಟ ಮಂಡಳ
ಮಿಜೋರಂ: ೧೦,೦೦೦ ಕ್ಕೂ ಅಧಿಕ ಮೂಷಿಕ ಹರಣ
ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ
ಸಚಿನ್-ಕಾಂಬ್ಳಿ ದಾಖಲೆ ಧ್ವಂಸ
|