|
ಬಾಹ್ಯಾಕಾಶ ಯಾನಕ್ಕೆ ಸಿದ್ಧ: ರಾಕೇಶ್ ಶರ್ಮ
ಬೆಂಗಳೂರು: ಮತ್ತೊಮ್ಮೆ ಅವಕಾಶ ದೊರೆತರೆ
ಗಗನಯಾನ ಮಾಡಲು ತಾವು ಸಿದ್ಧರಿರುವುದಾಗಿ ಭಾರತದ ಮೊದಲ
ಗಗನಯಾನಿ ರಾಕೇಶ್ ಶರ್ಮಾ ಹೇಳಿದ್ದಾರೆ.
೨೦೧೪ರಲ್ಲಿ ಭಾರತ ಪ್ರಪ್ರಥಮ ಬಾರಿಗೆ ಮಾನವ ಸಹಿತ
ಬಾಹ್ಯಾಕಾಶಯಾನ ನಡೆಸಲು ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ
ರಾಕೇಶ್ ಶರ್ಮ ಈ ರೀತಿ ಹೇಳಿಕೆ ನೀಡಿದ್ದಾರೆ.
೧೯೮೪ರಲ್ಲಿ ಸೋವಿಯಟ್ ಗಣರಾಜ್ಯ ಒಕ್ಕೂಟದ ಇಬ್ಬರು
ಗಗನಯಾತ್ರಿಗಳ ಜೊತೆಗೆ ರಾಕೇಶ್ ಶರ್ಮಾ ಬಾಹ್ಯಾಕಾಶಯಾನ
ಕೈಗೊಂಡಿದ್ದರು.
`ಅಂದು ಯಾತ್ರೆ ಮಾಡಿದಾಗ ದೈಹಿಕವಾಗಿ ಸಮರ್ಥನಾಗಿದ್ದೆ. ಮುಂದೆ
ಸಹ ಅವಕಾಶ ದೊರೆತರೆ ಅಂತರಿಕ್ಷಯಾನ ಕೈಗೊಳ್ಳಲು ಸಿದ್ಧ'
ಎಂದು ರಾಕೇಶ್ ಶರ್ಮ ಆತ್ಮವಿಶ್ವಾಸದಿಂದ ನುಡಿದಿದ್ದಾರೆ.
ವಿಮಾನ ಪರೀಕ್ಷಾ ಚಾಲಕರಾಗಿ ಸುಮಾರು ೩೩ ವರ್ಷಗಳ
ಅನುಭವವನ್ನು ರಾಕೇಶ್ ಶರ್ಮ ಹೊಂದಿದ್ದಾರೆ. ಭಾರತೀಯ
ವಾಯು ಸೇನೆಯಲ್ಲಿದ್ದ ರಾಕೇಶ್ ಅವರಿಗೆ ಪ್ರತಿಷ್ಠಿತ `ಅಶೋಕ
ಚಕ್ರ' ಪ್ರಶಸ್ತಿ ಲಭಿಸಿದೆ. ಅಮೇರಿಕದ ೭೦ ರ ಹರೆಯದ ಜಾನ್
ಗ್ಲೆನ್ ಗಗನಯಾನ ಮಾಡಿದ ಉದಾಹರಣೆ ನೀಡಿದ ರಾಕೇಶ್
ಶರ್ಮ(೫೭) ಗಗನಯಾತ್ರೆಗೆ ತಮ್ಮ ವಯಸ್ಸು
ಅಡ್ಡಿಯಾಗಲಾರದು ಎಂದಿದ್ದಾರೆ.
ಇನ್ನಷ್ಟು
ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ
ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್ಚಾಲಿತ ಬಸ್ಸು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
-ಅಧಿವೇಶನದಲ್ಲಿ ಹೋರಾಟ
ಸನ್ ಫೀಸ್ಟ್ ಚಿತ್ರ ಪ್ರಶಸ್ತಿ
ವಿತರಣೆ
ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ
ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!
ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ
|