|
ರಾಜಾಜಿನಗರ ವೆಬ್ ಸೈಟ್ ಸೇವೆ ಆರಂಭ
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಹೊಸ
ವೈಬ್ ಸೈಟ್ ಸಾರ್ವಜನಿಕ ಸೇವೆಗೆ ಮಂಗಳವಾರದಿಂದ ಮುಕ್ತವಾಗಿದೆ.
www.rajajinagara.kar.nic.in ಎಂಬ ಅಂತರ್ಜಾಲ ತಾಣದ
ಮೂಲಕ ಸಾರ್ವಜನಿಕರು ತಮ್ಮ ದೂರು ನೋಂದಾಯಿಸಬಹುದು.
ಜೊತೆಗೆ ಸಾರ್ವಜನಿಕರಿಗೆ ನೀಡಲಾಗುವ ಇತರ ಸೌಲಭ್ಯಗಳ ಬಗ್ಗೆ
ಮಾಹಿತಿಯನ್ನು ಪಡೆಯಬಹುದಾಗಿದೆ.
ವೈಬ್ಸೈಟ್ನಲ್ಲಿ ಕೊಟ್ಟಿರುವ ಇ-ಅರ್ಜಿಯ ಮೂಲಕ ಜನರು ತಮ್ಮ
ದೂರನ್ನು ದಾಖಲಿಸಬಹುದು. ಪ್ರತಿದಿನ ಜನರ ಆರ್ಜಿಯು ಕ್ಷೇತ್ರದ
ವಿಧಾನಸಭೆ ಸದಸ್ಯ (ಎಂ.ಎಲ್.ಎ) ನೆ.ಲ. ನರೇಂದ್ರ ಬಾಬು ಅವರ
ಕಚೇರಿ ಸೇರುತ್ತದೆ.
`ನನ್ನ ಕಚೇರಿಯ ಅಧಿಕಾರಿಗಳು ಸ್ವೀಕೃತವಾದ ದೂರನ್ನು ನಿರ್ಧಿಷ್ಟ
ಅವಧಿಯಲ್ಲಿ ಪರಿಶೀಲಿಸದಿದ್ದರೆ, ದೂರುಗಳು ಮುಂದಿನ ಉನ್ನತ
ಅಧಿಕಾರಿಗಳ ಕಚೇರಿಯನ್ನು ತಲುಪುತ್ತದೆ. ಸ್ವೀಕೃತ ದೂರಿನ
ಸಂಖ್ಯೆಯನ್ನು ಜನರಿಗೆ ನೀಡಲಾಗುವುದು' ಎಂದು ಶಾಸಕ ನೆ.ಲ.
ನರೇಂದ್ರ ಬಾಬು ಹೇಳಿದರು.
ರಾಜಾಜಿನಗರ ವೆಬ್ ಸೈಟ್ನ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ
ವೀರಪ್ಪ ಮೊಯ್ಲಿ ಅಧಿಕೃತವಾಗಿ ನೇರವೇರಿಸಿದರು.
ಇನ್ನಷ್ಟು
ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ
ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್ಚಾಲಿತ ಬಸ್ಸು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
-ಅಧಿವೇಶನದಲ್ಲಿ ಹೋರಾಟ
ಸನ್ ಫೀಸ್ಟ್ ಚಿತ್ರ ಪ್ರಶಸ್ತಿ
ವಿತರಣೆ
ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ
ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!
ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ
|