|
ಬೆಳೆ ಇಳುವರಿ ಪತ್ತೆಗೆ ಸಮೀಕರಣದ ನೆರವು
ಬೆಂಗಳೂರು: ಭಾರತೀಯ ವಿಜ್ಞಾನಿಗಳು ಸಂಶೋಧನೆ
ಮಾಡಿರುವ ಗಣಿತದ ಸಮೀಕರಣ(equation)ದ
ಮೂಲಕ ಬೆಳೆ ಇಳುವರಿಯನ್ನು ಮೊದಲೇ ಅಂದಾಜು
ಮಾಡಬಹುದಾಗಿದೆ.
ಈ ಸಮೀಕರಣದ ಮೂಲಕ ರಾಜ್ಯಾವಾರು ಬೆಳೆ ಇಳುವರಿಯನ್ನು
ಶೇ.೯೦ ಖಚಿತವಾಗಿ ಹೇಳಬಹುದಾಗಿದೆ.
ದೂರ ಸಂವೇದಿ ಉಪಗ್ರಹ ಹಾಗೂ ವಾತಾವರಣ ವಿಜ್ಞಾನದಿಂದ ಲಭ್ಯವಾದ
ಮಾಹಿತಿಯನ್ನು ಆಧಾರಿತ ಸಮೀಕರಣವನ್ನು ಐಐಟಿ ಕಾನ್ಪುರದ
ವಿಜ್ಞಾನಿಗಳಾದ ರಮೇಶ್ ಸಿಂಗ್, ಅನೂಪ್ ಕೆ ಪ್ರಸಾದ್ ಮತು ವಿನೋದ್
ತಾರೆ ಅವರು ಅಮೇರಿಕದ ಸಂಶೋಧಕ ಮೆನಾಸ್ ಕಫಾಟೊಸ್ ಜೊತೆ
ಸೇರಿ ಸೃಷ್ಟಿಸಿದ್ದಾರೆ.
ಭತ್ತ ಹಾಗೂ ಗೋಧಿ ಬೆಳೆಗೆ `ಇಳುವರಿ ಲೆಕ್ಕಾಚಾರ' ಹಾಕಲಾಗಿದ್ದು,
೧೯೯೭, ೧೯೯೮ ಹಾಗೂ ೧೯೯೯ ವರ್ಷದಲ್ಲಿ ಭಾರತದ ಅಂದಾಜು ಬೆಳೆ
ಇಳುವರಿಗೂ ನಮ್ಮ ಇಳುವರಿ ಸಮೀಕರಣಕ್ಕೂ ತುಂಬಾ ಸಾಮ್ಯತೆ
ಇದೆ.
ಇದೇ ಸಮೀಕರಣವನ್ನು ಉಪಯೋಗಿಸಿ ಇನ್ನುಳಿದ ಬೆಳೆಗಳ
ಇಳುವರಿಯ ಲೆಕ್ಕಾಚಾರವನ್ನು ಮೊದಲೇ ಮಾಡಬಹುದಾಗಿದೆ ಎಂದು
ರಮೇಶ್ ಸಿಂಗ್ ಹೇಳಿದ್ದಾರೆ.
ಇನ್ನಷ್ಟು
ಫ್ರಾನ್ಸ್ ದೇಶದ ಉನ್ನತ ಪ್ರಶಸ್ತಿಗೆ ಲತಾಜೀ ಆಯ್ಕೆ
ಕರ್ನಾಟಕಕ್ಕೆ ಸದ್ಯದಲ್ಲೆ ವಿದ್ಯುತ್ಚಾಲಿತ ಬಸ್ಸು
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ
-ಅಧಿವೇಶನದಲ್ಲಿ ಹೋರಾಟ
ಸನ್ ಫೀಸ್ಟ್ ಚಿತ್ರ ಪ್ರಶಸ್ತಿ
ವಿತರಣೆ
ಚಿತ್ರೋದ್ಯಮ ಬಿಕ್ಕಟ್ಟಿಗೆ ಸಿಎಂ ಪರಿಹಾರ
ಕರ್ನಾಟಕದ ಕೈಯಿಂದ ಜಾರಲಿದೆಯೆ? ಕಾರವಾರ!
ಕಬ್ಬು ಬೆಳೆಗಾರರಿಂದ ಅನಿರ್ಧಿಷ್ಟ ಮುಷ್ಕರ
|