|
ಸನ್ ಫೀಸ್ಟ್ ಚಿತ್ರ ಪ್ರಶಸ್ತಿ ವಿತರಣೆ: ಶ್ರೇಷ್ಠ ನಟ ಶಿವರಾಜ್, ನಟಿ
ರಮ್ಯಾ
ಬೆಂಗಳೂರು: ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ
ಸನ್ಫೀಸ್ಟ್-ಉದಯ ಟಿವಿ ಚಲನಚಿತ್ರ ಪ್ರಶಸ್ತಿ-೨೦೦೬ ಸಮಾರಂಭ
ಜರುಗಿತು.
ಜೀವಮಾನದ ಶ್ರೇಷ್ಠ ಸಾಧನೆಗಾಗಿ ಹಿರಿಯನಟ ಡಾ. ವಿಷ್ಣುವರ್ಧನ್
ಹಾಗೂ `ಹಸೀನಾ' ಚಿತ್ರದ ಅಭಿನಯಕ್ಕೆ ಶ್ರೀಮತಿ ತಾರಾ ಈ ಬಾರಿಯ
ಸನ್ಫೀಸ್ಟ್-ಉದಯ ಪ್ರಶಸ್ತಿ ಪಡೆದರು. `ಜೋಗಿ' ಚಿತ್ರದ
ಅಭಿನಯಕ್ಕಾಗಿ ನಟ ಶಿವರಾಜ್ಕುಮರ್ ಹಾಗೂ `ಅಮೃತಧಾರೆ'
ಚಿತ್ರದ ಅಭಿನಯಕ್ಕಾಗಿ ನಟಿ ರಮ್ಯಾ ಪ್ರಶಸ್ತಿಯನ್ನು
ತಮ್ಮದಾಗಿಸಿಕೊಂಡಿದ್ದಾರೆ.
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ
ಹೆಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಐಟಿಸಿ
ಪ್ರಾದೇಶಿಕ ವ್ಯವಸ್ಥಾಪಕ ಆರ್.ಎಂ. ರವಿಕುಮಾರ್, ಉದಯ ಟಿವಿ
ಅಧ್ಯಕ್ಷ ಮುರಸೋಳಿ ಸೆಲ್ವಂ, ಪ್ರತಿಪಕ್ಷ ನಾಯಕ ಧರ್ಮ ಸಿಂಗ್,
ಪಾರ್ವತಮ್ಮ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್,
ಪುನೀತ್ ರಾಜ್ ಕುಮಾರ್, ಭಾರತಿ ವಿಷ್ಣುವರ್ಧನ್, ಸುಮಲತಾ
ಅಂಬರೀಷ್, ರವಿಚಂದ್ರನ್, ಶ್ರುತಿ ಮತ್ತಿತರರು ಪಾಲ್ಗೊಂಡಿದ್ದರು.
ಇನ್ನಷ್ಟು
ಸ್ಯಾಮ್ ಪಿತ್ರೋಡಗೆ `ದಿ ಎಕಾನಾಮಿಸ್ಟ್' ನಿಂದ ಗೌರವ
ರಾಜ್ಯದಿಂದ ಏಫ್೧ ರೇಸ್ ಟ್ರಾಕ್ಗಾಗಿ ಅರ್ಜಿ
ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ
ಮಹಾದಾಯಿ ಯೋಜನೆಗೆ ಕೇಂದ್ರ ಸರ್ಕಾರದ ಅಡ್ಡಿ
ಕರಾಳ ದಿನಾಚರಣೆಗೆ ಡಿ.೧೧ರಂದು ಮುಹೂರ್ತ
ಇಂದು ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ
ಅಂತರ್ಜಾಲದ ಮೂಲಕ ತೆರಿಗೆ ವಂಚಕರ ಪತ್ತೆ
|