|
ನ.೧೪ರಿಂದ ರಾಜ್ಯದಲ್ಲಿ ಸಹಕಾರಿ ಸಪ್ತಾಹ
ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ
ನಿಯಮಿತ ನ. ೧೪ ರಿಂದ ೨೦ರವರೆಗೆ ಕರ್ನಾಟಕದಾದ್ಯಂತ `೫೩ನೇ ಅಖಿಲ
ಭಾರತ ಸಹಕಾರಿ ಸಪ್ತಾಹ' ಆಯೋಜಿಸಲಿದೆ.
ನ.೧೪ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ನಗರದ ಅಂಬೇಡ್ಕರ್
ಭವನದಲ್ಲಿ ಸಪ್ತಾಹಕ್ಕೆ ಚಾಲನೆಯನ್ನು ನೀಡಲಿದ್ದಾರೆ.
೭ ದಿನಗಳನ್ನೂ ವಿಶೇಷ ರೀತಿಯಲ್ಲೇ ಆಚರಿಸಲಾಗುತ್ತದೆ ಎಂದು
ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಹಕಾರ
ಮಹಾಮಂಡಳದ ಅಧ್ಯಕ್ಷ ಮತ್ತು ಶಾಸಕ ಜಿ.ಟಿ. ದೇವೇಗೌಡ
ಹೇಳಿದರು.
ಸಪ್ತಾಹದ ರೂಪುರೇಷೆ:
ಬೆಂಗಳೂರಿನಲ್ಲಿ
ನ.೧೪ರಂದು: ಸಹಕಾರಿ ಸ್ವಾಯತ್ತತೆ, ಉತ್ತಮ ಆಡಳಿತ ಮತ್ತು
ಮಾಹಿತಿ ಹಕ್ಕು ದಿನಾಚರಣೆ.
೧೫ರಂದು
`ವೃತ್ತಿಪರತೆಯನ್ನು ಬಲಪಡಿಸಲು ಮತ್ತು ಮಾಹಿತಿ ಸಂವಹನ
ತಂತ್ರಜ್ಞಾನ ಅನ್ವಯ' ದಿನಾಚರಣೆ.
೧೬ರಂದು
ಸಹಕಾರಿ ಮಾರಾಟ ರೂಪಾಂತರ ಹಾಗೂ ರೈತರ ದಿನಾಚರಣೆ.
ಬೆಳಗಾವಿಯಲ್ಲಿ
೧೭ರಂದು `ಸಹಕಾರಿ ಸಂಘಗಳ ಮೂಲಕ ಬಡತನ ಸುಧಾರಣೆ
ಮತ್ತು ಉದ್ಯೋಗ ಸೃಷ್ಟಿ' ಹಾಗೂ ಗ್ರಾಹಕ ದಿನಾಚರಣೆ.
ಹಾಸನದಲ್ಲಿ
೧೮ರಂದು `ಸಹಕಾರ ಸಂಘಗಳ ಮೂಲಕ ಮಹಿಳಾ ಹಾಗೂ ಯುವ
ಸಬಲೀಕರಣ' ಮತ್ತು ಸಾಮಾಜಿಕ ನ್ಯಾಯದ ದಿನಾಚರಣೆ.
ಮಂಗಳೂರಿನಲ್ಲಿ
ನ.೧೯ರಂದು `ಸಹಕಾರಿ ಮತ್ತು ಕಿರು ಹಣಕಾಸು ಹಾಗೂ ಯುವ
ಸಬಲೀಕರಣ' ಮತ್ತು ಸಾಮಾಜಿಕ ನ್ಯಾಯ ದಿನಾಚರಣೆ.
ಮಡಿಕೇರಿಯಲ್ಲಿ
೨೦ರಂದು `ಪ್ರಸ್ತುತ ವಾತಾವರಣದಲ್ಲಿ ಸಹಕಾರಿ ಅಸ್ತಿತ್ವ',
ಮೌಲ್ಯಗಳು ಹಾಗೂ ತತ್ವಗಳ ಬಲಪಡಿಸುವ ದಿನಾಚಣೆ.
ಸಹಕಾರಿ ಸಂಘಗಳ ವಿವಿಧ ಸಮಸ್ಯೆಗಳನ್ನು ಚರ್ಚಿಸಲು ಇದೊಂದು
ವೇದಿಕೆಯಾಗಲಿದೆ ಎಂದು ಗೌಡರು ವಿವರಿಸಿದರು.
ಇನ್ನಷ್ಟು
ಡಿಎಸ್ಎ ನಿಯಂತ್ರಣ ವಿಫಲ: ಎಚ್ಡಿಎಫ್ಸಿಗೆ ನೋಟೀಸ್
ಆಸ್ಪತ್ರೆಯಿಂದ ಹೊರಬಂದ ಪ್ರಭಾಕರ ಕೋರೆ
ಹಂಪಿ ಪ್ರದೇಶ ಪ್ರಾಧಿಕಾರ ಯೋಜನೆ ಸಿದ್ಧ
ಸಂಪುಟದ ಒಪ್ಪಿಗೆಗೆ ಕಾದಿರುವ ವಿಧಾನ ಸೌಧ
ನವೆಂಬರ್ ೧೬ರಿಂದ ತಲಕಾಡಿನಲ್ಲಿ ಮಹಾ ಉತ್ಸವ
ಮೋದಿ ಸ್ಮರಣಾರ್ಥ ನೇತ್ರ ಚಿಕಿತ್ಸಾ ಶಿಬಿರ
ಗ್ರೇಟರ್ ಬೆಂಗಳೂರಿಗೆ ಸಾವಿರ ನೌಕರರ ಅಗತ್ಯ
ಸಲೀಂ ಅಲಿ ಜನ್ಮ ಶತಮಾನೋತ್ಸವ ಆಚರಣೆ
|