|
ಮಂಗಳೂರು ಗಲಭೆ: ೩೭೦ ಅಹವಾಲುಗಳ ಸ್ವೀಕಾರ
ಮಂಗಳೂರು: ಮಂಗಳೂರು ಗಲಭೆಯ ತನಿಖೆಯ
ಸಲುವಾಗಿ ನಗರಕ್ಕೆ ಆಗಮಿಸಿರುವ ಕರ್ನಾಟಕ ರಾಜ್ಯ ಹೆಚ್ಚುವರಿ ಮುಖ್ಯ
ಕಾರ್ಯದರ್ಶಿ ಎ.ಕೆ. ಅಗರವಾಲ್ ಸುಮಾರು ೩೭೦ ಅಹವಾಲುಗಳನ್ನು
ಸ್ವೀಕರಿಸಿದರು.
`ಈಗ ತಾನೇ ಮನವಿ ಪತ್ರಗಳನ್ನು ಸ್ವೀಕರಿಸುತ್ತಿದ್ದೇನೆ. ಈಗಲೇ ಈ
ಬಗ್ಗೆ ಏನನ್ನೂ ಹೇಳಲಾಗದು. ಇಲ್ಲಿನ ಪರಿಸ್ಥಿತಿಯನ್ನು
ಕೂಲಂಕುಷವಾಗಿ ಪರೀಕ್ಷಿಸಿ ವರದಿ ಸಲ್ಲಿಸಲು ಸರ್ಕಾರವು ೧೫ ದಿನಗಳ
ಸಮಯ ನೀಡಿದೆ' ಎಂದು ಎ.ಕೆ. ಅಗರವಾಲ್ ಅವರು ಸುದ್ದಿಗಾರರಿಗೆ
ಹೇಳಿದರು. ಉಪ ಆಯುಕ್ತ ಮಹೇಶ್ವರ ರಾವ್, ಪೊಲೀಸ್ ಮಹಾ
ಅಧೀಕ್ಷಕ ಬಿ. ದಯಾನಂದ ಅವರು ಈ ಸಂದರ್ಭದಲ್ಲಿ
ಉಪಸ್ಥಿತರಿದ್ದರು.
ಗಲಭೆಯಲ್ಲಿ ನೊಂದವರು ತಮ್ಮ ಅಹವಾಲುಗಳನ್ನು ನವೆಂಬರ್
೧೩ರ ಒಳಗೆ ಉಪ ಆಯುಕ್ತರ ಕಚೇರಿಯಲ್ಲಿ ಸಲ್ಲಿಸಬಹುದು.
ಎರಡು ದಿನಗಳ ತನಿಖೆಗಾಗಿ ತೆರಳಿರುವ ಎ.ಕೆ. ಅಗರವಾಲ್
ಕುತ್ತೂರು, ಉಲ್ಲಾಳ, ಸುಭಾಶ್ ನಗರ, ಪಡಾವು ಜಂಕ್ಷನ್,
ಸುರತ್ಕಲ್, ಫರಂಗಿಪೇಟೆ, ಬಿ.ಸಿ. ರಸ್ತೆ, ವೀರಾನಗರ, ಫೈಜಲ್
ನಗರ, ಅಡೂರು ಮುಂತಾದ ಪ್ರದೇಶವನ್ನು ವೀಕ್ಷಿಸಲಿದ್ದಾರೆ.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್ಯಾಲಿ
|