|
ಚಾಮುಂಡೇಶ್ವರಿ ಉ.ಚ: ರಾಜಕೀಯ ಬೆಳವಣಿಗೆಗಳು
ಬೆಂಗಳೂರು: ಚಾಮುಂಡೇಶ್ವರಿ ಉಪಚುನಾವಣೆಗೆ
ಸಂಬಂಧಿಸಿದಂತೆ ಜೆಡಿಎಸ್-ಬಿಜೆಪಿ ಒಮ್ಮತದ ಅಭ್ಯರ್ಥಿಯನ್ನು ಇನ್ನೂ
ಆಯ್ಕೆ ಮಾಡಿಲ್ಲ. ರಾಜ್ಯದ ರಾಜಕೀಯದ ಪ್ರಮುಖ
ಘಟನೆಯಾಗಲಿರುವ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಗೆಲ್ಲಲು
ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್-ಬಿಜೆಪಿಗಳು ಸರ್ವ ಪ್ರಯತ್ನ
ಮಾಡುತ್ತಿದೆ.
ಜೆಡಿಎಸ್ ಅಭ್ಯರ್ಥಿ ಆಯ್ಕೆಗಾಗಿ ಗೌಡರ ಮುಂದೆ ಶಿವಬಸಪ್ಪ, ಎ.ಎಸ್.
ಗುರುಸ್ವಾಮಿ, ಶಿವಮೂರ್ತಿ, ಶೇಖರ್, ಶರಣಪ್ಪ ಮತ್ತು ಮಲ್ಲಹಳ್ಳಿ
ಮಹಾದೇವ ಸ್ವಾಮಿ ಅವರ ಹೆಸರುಗಳಿವೆ.
ಮೈಸೂರು ತಾಲೂಕಿನ ವೀರಶೈವ ಸಂಘದ ಅಧ್ಯಕ್ಷ ಮತ್ತು
ಸಂಸದ ರಾಜಶೇಖರ ಮೂರ್ತಿ ಅವರ ಬೆಂಲಿಗರಾದ ಶಿವಬಸಪ್ಪ
ಅವರನ್ನೇ ಜೆಡಿಎಸ್ ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ.
ತಪ್ಪಿದರೆ ಮಾಜಿ ಶಾಸಕ ಎ.ಎಸ್. ಗುರುಸ್ವಾಮಿ ಜೆಡಿಎಸ್ನ
ಉಮೇದುವಾರರಾಗಲಿದ್ದಾರೆ.
ವೀಕ್ಷಕರನ್ನು ನೇಮಿಸಲು ಸಿದ್ಧರಾಮಯ್ಯ ಕೋರಿದ್ದಾರೆ.
ಬಿಹಾರದಂತೆ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ವೀಕ್ಷಕರನ್ನು
ನೇಮಿಸಬೇಕು ಎಂದು ಮಾಜಿ ಉಪಮುಖ್ಯ ಮಂತ್ರಿ ಮತ್ತು ಕಾಂಗ್ರೆಸ್
ಉಮೇದುವಾರರಾಗಿರುವ ಸಿದ್ಧರಾಮಯ್ಯ ಚುನಾವಣಾ ಆಯೋಗಕ್ಕೆ
ಪತ್ರ ಬರೆದಿದ್ದಾರೆ.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್ಯಾಲಿ
|