|
ರಾಜ್ಯದಿಂದ ೬,೦೦೦ಕ್ಕೂ ಅಧಿಕ ಜನ ಹಜ್ ಯಾತ್ರೆಗೆ
ಮಂಗಳೂರು: ಸುಮಾರು ೬೬೦೦ ಕ್ಕೂ ಅಧಿಕ ಜನ ಹಜ್
ಯಾತ್ರೆಗೆ ತೆರಳಲಿದ್ದಾರೆ ಎಂದು ರಾಜ್ಯದ ವಕ್ಫ್ ಹಾಗೂ ಹಜ್ ಖಾತೆ
ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ಮೆಕ್ಕಾ, ಮದೀನ ಹಾಗೂ ಮಿನಾರ್ಗೆ ಪಯಣಿಸುವ ಯಾತ್ರಿಗಳಿಗೆ
ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು
ಎಂದು ಸಚಿವ ಜಮೀರ್ ಹೇಳಿದ್ದಾರೆ.
ಈ ಬಾರಿ ಕೇಂದ್ರ ಹಜ್ ಸಮಿತಿ ಕೃಪೆಯಿಂದ ೪,೫೦೦ಕ್ಕೆ ಸೀಮಿತವಾಗಿದ್ದ
ಪಟ್ಟಿ ಈ ಬಾರಿ ೬,೯೦೦ಕ್ಕೆ ಏರಿದೆ.
ಪ್ರತಿಯೊಬ್ಬ ಯಾತ್ರಾರ್ಥಿಯೂ ೨೫,೦೦೦ ಸಾವಿರ ರೂಗಳ ಸಬ್ಸಿಡಿ
ಹಣವನ್ನು ಪಡೆಯಲಿದ್ದಾರೆ. ಈ ತಿಂಗಳ ಮೂರನೇ ವಾರದಲ್ಲಿ
ಬೆಂಗಳೂರಿನಿಂದ ಮೊದಲ ತಂಡ ಮೆಕ್ಕಾಗೆ ತೆರಳಲಿದೆ.
ಪೂರಕ ಮಾಹಿತಿ:
ಮೈಸೂರು: ಪವಿತ್ರ ಯಾತ್ರಾ ಸ್ಥಳ ಮೆಕ್ಕಾಗೆ ನವೆಂಬರ್ ೨೨ರಂದು
ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಿಂದ ಒಟ್ಟು
೭೭೮ ಯಾತ್ರಿಗಳು ತೆರಳಲಿದ್ದಾರೆ.
ಹಜ್ ಯಾತ್ರಿಗಳಿಗಾಗಿ ನಡೆದ ತರಬೇತಿ ಶಿಬಿರದಲ್ಲಿ ಉಪಸ್ಥಿತರಿದ್ದ
ಜಮೀರ್ ಅಹಮದ್ ಕಳೆದ ಮಂಗಳವಾರ ಮೊದಲ ಬಾರಿ ಯಾತ್ರೆ
ಮಾಡುವವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಸುಳ್ಳು
ಹೇಳುವವರನ್ನು ಪತ್ತೆ ಹಚ್ಚಲು ಸಾಫ್ಟ್ ವೇರ್ ತಂತ್ರಾಂಶ
ಉಪಯೋಗಿಸಲಾಗುತ್ತಿದೆ ಎಂದು ಹೇಳಿದರು.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್ಯಾಲಿ
|