|
ದಾವಣಗೆರೆ ಅಭಿವೃದ್ಧಿಗೆ ೮೮.೫೦ ಕೋಟಿ ರೂ. ಬಿಡುಗಡೆ
ದಾವಣಗೆರೆ: ಕೇಂದ್ರ ಸರ್ಕಾರದ ಸಣ್ಣ ಮತ್ತು ಮಧ್ಯಮ
ಪಟ್ಟಣಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯ
ಫಲಾನುಭವಿಯಾಗಲಿದೆ.
ಈ ಯೋಜನೆಯು ಕುಡಿಯುವ ನೀರಿನ ಪೂರೈಕೆ, ಒಳಚರಂಡಿಗಳ
ಮತ್ತು ರಸ್ತೆಗಳ ನಿರ್ಮಾಣಗಳನ್ನು ಒಳಗೊಂಡಿದೆ.
`ಹಂತ-ಹಂತವಾಗಿ ೮೮.೫೦ ಕೋಟಿ ರೂ.ಗಳನ್ನು ದಾವಣಗೆರೆ
ನಗರಸಭೆ ಪಡೆಯಲಿದೆ. ಆಶ್ರಯ ಯೋಜನೆಯ ಅಡಿಯಲ್ಲಿ
ಬರುವ ಬಡಾವಣೆಗಳು ಮತ್ತು ೮ ಹಳ್ಳಿಗಳು ಈ ಯೋಜನೆಯ
ಉಪಯೋಗವನ್ನು ಪಡೆಯಲಿದ್ದಾರೆ' ಎಂದು ನಗರಸಭೆಯ
ಅಧ್ಯಕ್ಷ ದಿನೇಶ ಶೆಟ್ಟಿ ಹೇಳಿದ್ದಾರೆ.
`ಬಿಡುಗಡೆಯಾಗಲಿರುವ ಹಣದ ೮೦ ಶೇ. ಕೇಂದ್ರವೂ ಉಳಿದ ೨೦ ಶೇ.
ರಾಜ್ಯ ಸರ್ಕಾರವೂ ನೀಡಲಿದೆ. ಕುಡಿಯುವ ನೀರಿನ ಪೂರೈಕೆಗಾಗಿ
೩೫೫.೮೦ ಲಕ್ಷ ರೂ., ಚರಂಡಿ ನಿರ್ಮಾಣಕ್ಕಾಗಿ ೩೦೫.೫೦ ಲಕ್ಷ ರೂ.,
೩೧೨೮.೪೦ ಲಕ್ಷ ರಸ್ತೆ ನಿರ್ಮಾಣಕ್ಕಾಗಿ ಹಾಗೂ ೫೦೬೦.೩೦ ನೀರಾವರಿಗಾಗಿ
ಮೀಸಲಿಡಲಾಗಿದೆ. ಇದು ಪಂಚವಾರ್ಷಿಕ ಯೋಜನೆಯಾಗಿದ್ದು,
ಯೋಜನೆಯ ನೀಲ ನಕ್ಷೆಯನ್ನು ಕೇಂದ್ರ ಸರ್ಕಾರದ ಒಪ್ಪಿಗೆಗೆ
ಕಳುಹಿಸಿಕೊಡಲಾಗಿದೆ. ಈ ಕಾಮಗಾರಿಗಳ ಮೇಲ್ವಿಚಾರಣೆ ಕೇಂದ್ರ
ಸರ್ಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಯೇ ಮಾಡುತ್ತಾರೆ' ಎಂದು ಶೆಟ್ಟಿ
ವಿವರಿಸಿದರು.
ಇನ್ನಷ್ಟು
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್ಯಾಲಿ
|