|
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್ಯಾಲಿ
ಬೆಂಗಳೂರು: ಕರ್ನಾಟಕ ಕೋಮು ಸೌಹಾರ್ದ ವೇದಿಕೆ
ನ.೨೬ರಂದು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿಯನ್ನು ಆಯೋಜಿಸಲಿದೆ.
ಮಂಗಳೂರಿನಲ್ಲಿ ಪೊಲೀಸ್ ದೌರ್ಜನ್ಯ ತಡೆದು ಪುನಃ ಸಾಮಾನ್ಯ
ಸ್ಥಿತಿಯನ್ನು ತರುವುದು ಮತ್ತು ದತ್ತಪೀಠ ವಿವಾದದಲ್ಲಿ ಸರ್ಕಾರ
ಈಗ ಯಾವ ನಿಲುವನ್ನು ತೆಗೆದುಕೊಂಡಿದೆಯೋ ಅದೇ ನಿಲುವನ್ನು
ಮುಂದುವರಿಸಿಕೊಂಡು ಹೋಗುವಂತೆ ರಾಜ್ಯ ಸರ್ಕಾರದ ಮೇಲೆ
ಒತ್ತಡ ಹೇರುವುದು ಈ ರ್ಯಾಲಿಯ ಉದ್ದೇಶವಾಗಿದೆ.
`ಕರ್ನಾಟಕವನ್ನು ಇನ್ನೊಂದು `ಗುಜರಾತ್' ರೀತಿ ಮಾಡಲು ರಾಜಕೀಯ
ಪಕ್ಷಗಳು ಹೊರಟಿವೆ. ಸಂಘ ಪರಿವಾರಗಳು ದತ್ತಪೀಠ ವಿವಾದಕ್ಕೆ
ಅಯೋಧ್ಯೆಯ ಬಣ್ಣವನ್ನು ಕೊಡುತ್ತಿದ್ದಾರೆ' ಎಂದು ವೇದಿಕೆಯ
ಅಧ್ಯಕ್ಷರಾದ ಪ್ರೊ. ರಾಚಪ್ಪ ಆಪಾದಿಸಿದರು.
ರ್ಯಾಲಿಯಲ್ಲಿ ರಾಜ್ಯಾದ್ಯಂತ ಗಿರೀಶ್ ಕಾರ್ನಾಡ್, ಗದಗದ ತೋಂಟದಾರ್ಯ
ಸ್ವಾಮೀಜಿ, ದಲಿತ ಸಂಘರ್ಷ ಸಮಿತಿಯ ಮುಖಂಡರು ಮತ್ತು
ಸದಸ್ಯರು ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದಲ್ಲಿ ಸಾಮರಸ್ಯ ಹೆಚ್ಚಿಸಲು ರಾಜ್ಯದಾದ್ಯಂತ ಒಂದು ವಾರದ
ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಇದರ ಚಾಲನೆ
ಮಂಗಳೂರಿನಲ್ಲಿ ಮಾಡಲಾಗುವುದು. ಈ ಪ್ರಾರಂಭೋತ್ಸವಕ್ಕೆ
ಖ್ಯಾತ ಲೇಖಕಿ ಅರುಂಧತಿ ರಾಯ್ ಮತ್ತು ಖ್ಯಾತ ನರ್ಮದಾ ಬಚಾವೊ
ಆಂಧೋಲನದ ಮೇಧಾ ಪಾಟ್ಕರ್ ಅವರನ್ನು ಆಹ್ವಾನಿಸಲಾಗಿದೆ ಎಂದು
ರಾಚಪ್ಪ ಮಾಹಿತಿ ನೀಡಿದರು.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|