|
ಈ ಟಿವಿಯಲ್ಲಿ ನಟ ಸಾರ್ವಭೌಮನಿಗೆ ನಮಸ್ಕಾರ
ಬೆಂಗಳೂರು: ನ.೧೨ರಿಂದ ಡಾ. ರಾಜ್ಕುಮಾರ್ ಸವಿನೆನಪಿಗಾಗಿ
ಈ ಟಿವಿಯಲ್ಲಿ `ನಮಸ್ಕಾರ' ಸಂದರ್ಶನ ಮಾಲಿಕೆಯಲ್ಲಿ`ನಟ
ಸಾರ್ವಭೌಮನಿಗೆ ನಮಸ್ಕಾರ' ಎನ್ನುವ ಕಾರ್ಯಕ್ರಮ
ಪ್ರಸಾರವಾಗಲಿದೆ.
೨ ಕಂತುಗಳಲ್ಲಿರುವ ಈ ಕಾರ್ಯಕ್ರಮದಲ್ಲಿ ನ.೧೨ರಂದು
ಪ್ರಸಾರವಾಗಲಿರುವ ಮೊದಲನೇ ಕಂತಿನ ಕಾರ್ಯಕ್ರಮದಲ್ಲಿ
ಪಾರ್ವತಮ್ಮ ರಾಜ್ಕುಮಾರ್ ಅತಿಥಿಯಾಗಿ ಆಗಮಿಸಿ ತಮ್ಮ ನೆನಪನ್ನು
ಹಂಚಿಕೊಳ್ಳಲಿದ್ದಾರೆ.
ರಾಜ್ಕುಮಾರ್ಅವರ ನಿಕಟವರ್ತಿಗಳು, ಬಂಧುಬಳಗದವರು ಎಲ್ಲಾ ಈ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
`ಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು ರಾಜ್ಕುಮಾರ್ ಅವರ
ಬಣ್ಣದ ಬದುಕಿನ ಸುವರ್ಣ ಮಹೋತ್ಸವದಿಂದ ಬೇರ್ಪಡಿಸುವಂತಿಲ್ಲ.
ಕನ್ನಡದ ಆತ್ಮಸಾಕ್ಷಿ ಮತ್ತು ಸ್ಥೈರ್ಯವನ್ನು ಕಟ್ಟಿ ರೂಪಿಸಿದ
ನಾಯಕನನ್ನು ಮಾನವೀಯ ಆಸಕ್ತಿಯ ಕಣ್ಣುಗಳಿಂದ ಅರಿಯುವ
ಯತ್ನ ಇದು' ಎಂದು ಪ್ರಸಿದ್ಧ ಸಾಹಿತಿ ಮತ್ತು ಕಾರ್ಯನಿರೂಪಕ
ಜಯಂತ್ ಕಾಯ್ಕಿಣಿ ತಿಳಿಸಿದ್ದಾರೆ.
ಇನ್ನಷ್ಟು
ಜಿಲ್ಲೆಗಳಿಗೂ ವ್ಯಾಪಿಸಿದ ಕನ್ನಡ ಸಾಹಿತ್ಯ.ಕಾಂ
ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ
ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್ಯಾಲಿ
|