|
ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್
ನವದೆಹಲಿ: ಕುದುರೆಮುಖ ಕಬ್ಬಿಣ ಅದಿರು
ಕಂಪೆನಿ(ಕೆಐಒಸಿಎಲ್)ಯ ಗಣಿಗಾರಿಕೆ ನಿಂತಿರುವ ಹಿನ್ನೆಲೆಯಲ್ಲಿ ಅಲ್ಲಿನ
ನೌಕರರಿಗೆ ಪರ್ಯಾಯ ವ್ಯವಸ್ಥೆ ಕುರಿತಂತೆ ಕರ್ನಾಟಕ ಸರ್ಕಾರ
ಶೀಘ್ರದಲ್ಲೇ ಸುಪ್ರೀಂ ಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಲಿದೆ ಎಂದು
ಕೇಂದ್ರ ಉಕ್ಕು ಮತ್ತು ರಸಗೊಬ್ಬರ ಖಾತೆ ಸಚಿವ ರಾಮ್ ವಿಲಾಸ್
ಪಾಸ್ವಾನ್ ಹೇಳಿದ್ದಾರೆ.
`ಕೆಐಸಿಒಎಲ್ಗೆ ಪರ್ಯಾಯ ಗಣಿ ನಿಕ್ಷೇಪ ಒದಗಿಸುವ ಬಗ್ಗೆ
ಕರ್ನಾಟಕ ಸರ್ಕಾರದೊಂದಿಗೆ ಚರ್ಚಿಸಲಾಗಿದೆ. ಪ್ರಮಾಣಪತ್ರ
ಸಲ್ಲಿಸುವುದಾಗಿ ಕರ್ನಾಟಕದಿಂದ ಭರವಸೆ ದೊರೆತಿದೆ' ಎಂದು ಪಾಸ್ವಾನ್
ಹೇಳಿದ್ದಾರೆ.
ಪಶ್ಚಿಮಘಟ್ಟದಲ್ಲಿ ಪರಿಸರ ನಾಶಕ್ಕೆ ಕಾರಣವಾಗುತ್ತಿದೆ ಎಂದು
ಪರಿಸರವಾದಿಗಳು ಸುಪ್ರೀಂ ಕೋರ್ಟ್ಗೆ ದೂರು ಸಲ್ಲಿಸಿದ್ದ
ಹಿನ್ನೆಲೆಯಲ್ಲಿ ಗಣಿಗಾರಿಕೆ ಸ್ಥಗಿಸಗೊಳಿಸುವಂತೆ ನ್ಯಾಯಾಲಯ
ಆದೇಶ ನೀಡಿತ್ತು.
ನಂತರ ಕೆಐಒಸಿಎಲ್ ಸಲ್ಲಿಸಿದ್ದ ಮೇಲ್ಮನವಿಯೂ ತಿರಸ್ಕಾರಗೊಂಡು
ಡಿಸೆಂಬರ್ ೩೧ರಂದು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಕಂಪೆನಿ
ಮುಚ್ಚಿದ್ದರಿಂದ ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದರು.
ಇನ್ನಷ್ಟು
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್ಯಾಲಿ
ಪ್ರವಾಸೋದ್ಯಮಕ್ಕೆ ೨೫೦ ಕೋಟಿ ರೂ:ಡಿಸಿಎಂ
ಬೆಂಗಳೂರಿನ ಬಡ ಮಹಿಳೆಯರಿಗೆ ಚಿಕ್ಕ ಸಾಲ
ಆಂತರಿಕ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಬಿಜೆಪಿ ಸಭೆ
ಕಾಲೇಜು ಆವರಣಗಳಲ್ಲಿ
ತಂಬಾಕು ಉತ್ಪನ್ನಗಳಿಗೆ ಕೋಕ್
ಭಾಗ್ಯಲಕ್ಷ್ಮಿ ಯೋಜನೆಗೆ
ನವೆಂಬರ್ ೧೪ರಿಂದ ಜಾರಿಗೆ
ಸದ್ದಾಂ ಹುಸೇನ್ಗೆ ಗಲ್ಲು ಶಿಕ್ಷೆ
|