|
ಭಾಗ್ಯಲಕ್ಷ್ಮಿ ಯೋಜನೆಗೆ ನವೆಂಬರ್ ೧೪ರಿಂದ ಜಾರಿಗೆ
ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕ್ಷಾಂಕೆಯ
`ಭಾಗ್ಯಲಕ್ಷ್ಮಿ' ಯೋಜನೆ ನವೆಂಬರ್ ೧೪ರಿಂದ ಪ್ರಾರಂಭವಾಗಲಿದೆ.
`ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ವಿದ್ಯಾರ್ಥಿನಿರ
ಹೆಸರಿನಲ್ಲಿ ೧೦,೦೦೦ರೂಗಳ ಠೇವಣಿಯನ್ನು ಸರ್ಕಾರ ಇಡುತ್ತದೆ.
ಈ ಯೋಜನೆಯು ಮಕ್ಕಳ ದಿನಾಚರಣೆಯಿಂದ ಜಾರಿಗೆ ಬರಲಿದೆ' ಎಂದು
ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವ ಹೆಚ್.ಕೆ. ಕುಮಾರಸ್ವಾಮಿ
ಹೇಳಿದ್ದಾರೆ.
ಈ ಯೋಜನೆಗೆ ಸುಮಾರು ೧ ಲಕ್ಷ ಹುಡುಗಿಯರು
ನೋಂದಾಯಿಸಿದ್ದಾರೆ. ನವೆಂಬರ್ ೧೪ ರಂದು ಮಂಜೂರಾತಿ ಪತ್ರವನ್ನು
ಬೆಂಗಳೂರು ನಗರ ಹಾಗೂ ಗ್ರಾಮೀಣ ವಿಭಾಗದ ವಿದ್ಯಾರ್ಥಿನಿಯರಿಗೆ
ನೀಡಲಾಗುವುದು. ನಂತರ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ
ವಿತರಿಸಲಾಗುವುದು. ಹೆಚ್ಡಿಎಫ್ಸಿ, ಎಲ್ಐಸಿ, ವೈಶ್ಯ ಬ್ಯಾಂಕ್ ಮತ್ತು
ಐಸಿಐಸಿಐ ಬ್ಯಾಂಕ್ಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಇಚ್ಛೆ
ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ
ಗದಗಿನ ಸ್ವಯಂ ಉದ್ಯೋಗ ತರಬೇತಿ ಗ್ರಾಮೀಣ ಅಭಿವೃದ್ಧಿ ಘಟಕ
ಮತ್ತು ಬೆಂಗಳೂರಿನ ಪರಸ್ಪರ ಸಂಸ್ಥೆಯನ್ನು
ಗೌರವಿಸಲಾಗುವುದು. ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|