|
ಅಕ್ರಮ ಗಣಿಗಾರಿಕೆ: `ಸ್ಟಾಂಪಿಟ್' ಮಾದರಿ ತನಿಖಾತಂಡ
ಬೆಂಗಳೂರು: ರಾಜ್ಯದ ರಾಜಕಾರಣದಲ್ಲಿ ಕೋಲಾಹಲವನ್ನೇ
ಮೂಡಿಸಿದ ಕನಕಪುರ ಮತ್ತು ಬಳ್ಳಾರಿಗಳ ಅಕ್ರಮ ಗಣಿಗಾರಿಕೆ
ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಸ್ಟಾಂಪಿಟ್ ಮಾದರಿಯ
ಎರಡು ಪ್ರತ್ಯೇಕ ತನಿಖಾದಳವನ್ನು ರಚಿಸಲು ನಿರ್ಧರಿಸಿದೆ.
ಛಾಪಾ ಕಾಗದ ಹಗರಣವನ್ನು ಯಶಸ್ವಿಯಾಗಿ ತನಿಖೆ ನಡೆಸಿದ
`ಸ್ಟಾಂಪಿಟ್' ತನಿಖಾ ದಳದ ಸ್ವರೂಪದಲ್ಲೇ ಈ ತನಿಖಾ ದಳವೂ
ಇರಲಿದೆ. ತನಿಖೆಗೆ ಅಗತ್ಯವಿದ್ದರೆ ಯಾವುದೇ ವ್ಯಕ್ತಿ ಅಥವಾ ಕಂಪೆನಿ
ಪ್ರತಿನಿಧಿಗಳನ್ನು ವಿಚಾರಿಸುವ, ತಪ್ಪಿತಸ್ಥರನ್ನು ಬಂಧಿಸುವ,
ನ್ಯಾಯಾಲಯಕ್ಕೆ ಹಾಜರುಪಡಿಸುವ, ಮತ್ತು ಆರೋಪ ಪಟ್ಟಿ
ಸಲ್ಲಿಸುವ ಅಧಿಕಾರಗಳನ್ನು ಈ ತನಿಖಾ ತಂಡಕ್ಕೆ ನೀಡಲಾಗುವುದು.
ತನಿಖಾತಂಡಗಳ ಸದಸ್ಯರು, ಅದರ ಕಾರ್ಯವ್ಯಾಪ್ತಿ, ಸ್ವರೂಪಗಳ
ಬಗ್ಗೆ ಇನ್ನೂ ಏನನ್ನೂ ನಿರ್ಧರಿಸಲಾಗಿಲ್ಲ. ಈ ಬಗ್ಗೆ ಇನ್ನೊಂದು
ವಾರದೊಳಗೆ ಸರ್ಕಾರ ಇದರ ಬಗ್ಗೆ ಅಧಿಕೃತ ಸೂಚನೆ ಹೊರಡಿಸಲಿದೆ.
ಇನ್ನೊಂದೆಡೆ ಗಣಿ ಲಂಚ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು
ಜನಾರ್ಧನ ರೆಡ್ಡಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿದ್ದರು. ಇದರ
ವಿಚಾರಣೆ ಕೂಡಾ ನಡೆಯುತ್ತಿದೆ.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|