|
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಮೈಸೂರು: ಪಾಕಿಸ್ತಾನ ಮೂಲದ ಬಂಧಿತ ಉಗ್ರರಿಗೆ ನೆರವು
ನೀಡಿದ ಆರೋಪದ ಮೇಲೆ ನಗರ ಪೊಲೀಸರು ಬುಧವಾರ
ಮತ್ತಿಬ್ಬರು ಸ್ಥಳೀಯ ಏಜೆಂಟರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
`ಕಳೆದ ಗುರುವಾರ ನಡೆಸಿದ ಕಾರ್ಯಾಚರಣೆ ವೇಳೆ ಬಂಧಿತರಾದ
ಉಗ್ರರಿಗೆ ನೆರವಾದ ಹಿನ್ನೆಲೆಯಲ್ಲಿ ಮೂವರು ಸ್ಥಳೀಯರನ್ನು
ದಸ್ತಗಿರಿ ಮಾಡಲಾಯಿತು. ಈ ಸಂಬಂಧದಲ್ಲಿ ಒಟ್ಟು ೫ ಮಂದಿಯನ್ನು
ಬಂಧಿಸಿದಂತಾಗಿದೆ.' ಎಂದು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
`ಇಸ್ಮಾಯಿಲ್ ನಾನೇ ಫಹಾದ್ ಎಂದು ಕೋರ್ಟ್ನಲ್ಲಿ ನ್ಯಾಯಾಧೀಶರ
ಎದುರು ಅಫಿಡವಿಟ್ ಸಲ್ಲಿಸಿದ್ದ. ಆರೋಪಿ ಫಹಾದ್ಗೆ ಕನ್ನಡ
ಬರುತ್ತಿರಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಸುಳ್ಳು ಹೇಳಿಕೆಯನ್ನು
ಇಸ್ಮಾಯಿಲ್ ನೀಡಿದ್ದ. ಇದೇ ರೀತಿ ಮತ್ತೊಬ್ಬ ಆರೋಪಿ ಅಲಿ ಹುಸೇನ್ಗೆ
ನಕಲಿ ಎಸ್ಎಸ್ಎಲ್ಸಿ ಪ್ರಮಾಣ ಪತ್ರ ಸೃಷ್ಟಿಸುವುದರ ಜತೆಗೆ ವಾಹನ
ಚಾಲನ ಪರವಾನಿಗೆ ಪತ್ರವನ್ನು ಒಂದೇ ದಿನದಲ್ಲಿ ಕೊಡಿಸಿದ್ದ ಆರೋಪದ
ಮೇಲೆ ಆರ್ಟಿಓ ಏಜೆಂಟ್ ರಫೀಕ್ನನ್ನು ಬಂಧಿಸಲಾಗಿದೆ' ಎಂದು
ಆಯುಕ್ತ ಪ್ರವೀಣ್ ಸೂದ್ ತಿಳಿಸಿದರು.
ಇನ್ನಷ್ಟು
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|