|
ನೈಸ್ ವಿವಾದಕ್ಕೆ ತೆರೆ ಎಳೆದ ಸರ್ವೋಚ್ಚ ನ್ಯಾಯಾಲಯ
ನವದೆಹಲಿ: ಸುಳಿಯಲ್ಲಿ ಸಿಕ್ಕಿದ್ದ ಬಹು ಕೋಟಿ
ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿ ಯೋಜನೆಯ ಹಾದಿ
ಸರ್ವೋಚ್ಚ ನ್ಯಾಯಾಲಯ ದ ತೀರ್ಪಿನಿಂದ ಸುಗಮವಾಗಿದೆ.
ಕರ್ನಾಟಕ ಸರ್ಕಾರ `ನೈಸ್ ಕಂಪೆನಿ ಸರ್ಕಾರಿ ದಾಖಲೆಗಳನ್ನು ತಿರುಚಿ
ಅಕ್ರಮವಾಗಿ ಸುಮಾರು ೩೦ ಸಾವಿರ ಕೋಟಿ ರೂ. ಬೆಲೆ ಬಾಳುವ
ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಆರೋಪಿಸಿ ಸರ್ವೋಚ್ಚ
ನ್ಯಾಯಾಲಯಕ್ಕೆ ಉಚ್ಚ ನ್ಯಾಯಾಲಯದ ತೀರ್ಪನ್ನು ಪುನರ್
ಪರಿಶೀಲನೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ
ಸಲ್ಲಿಸಿತ್ತು.
ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದ ಸರ್ವೋಚ್ಚ
ನ್ಯಾಯಾಲಯ, ರಾಜ್ಯ ಸರ್ಕಾರದ ಅರ್ಜಿ ದುರುದ್ದೇಶದಿಂದ ಕೂಡಿದೆ.
ರಾಜ್ಯ ಸರ್ಕಾರ ೫ ಲಕ್ಷ ರೂ. ಮತ್ತು ಅರ್ಜಿದಾರರಾದ ಮಧುಸ್ವಾಮಿ
ಮತ್ತು ಶ್ರೀರಾಮರೆಡ್ಡಿ ಅವರಿಗೆ ನ್ಯಾಯಲಯದ ವೆಚ್ಚ ೫೦,೦೦೦ ರೂ
ಭರಿಸುವಂತೆ ತೀರ್ಪಿತ್ತಿದೆ.
ತೀರ್ಪಿಗೆ ಪ್ರತಿಕ್ರಿಯೆಗಳು.
ನೈಸ್ ಕಂಪೆನಿ: `ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ
ಕರ್ನಾಟಕದ ಜನತೆಗೆ ಒಪ್ಪಿಸಲಾಗುವುದು. ಇದಕ್ಕೆ ರಾಜಕೀಯ
ಪಕ್ಷಗಳು ಭಿನ್ನಾಭಿಪ್ರಾಯ ಮರೆತು ಸಹಕಾರ ನೀಡಬೇಕು.'
ಕಾನೂನು ಸಚಿವ ಎಂ. ಪಿ. ಪ್ರಕಾಶ್: ಸರ್ವೋಚ್ಚ
ನ್ಯಾಯಾಲಯದ ತೀರ್ಪಿನ ಅಧಿಕೃತ ಆದೇಶ ಸಿಕ್ಕ ನಂತರ ಮುಂದಿನ
ನಿರ್ಧಾರ ಕೈಗೊಳ್ಳಲಾಗುವುದು.
ಮುಖ್ಯಮಂತ್ರಿ ಕುಮಾರಸ್ವಾಮಿ: ಕಾನೂನು ತಜ್ಞರ ಸಲಹೆ
ಕೇಳಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಾನೂನಿನ
ಚೌಕಟ್ಟಿನಲ್ಲಿ ಸರ್ಕಾರ ಜನಪರ ಹೋರಾಟ ನಡೆಸಲಿದೆ.
ಇನ್ನಷ್ಟು
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|