|
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
ಕಾಗಿನೆಲೆ(ಹಾವೇರಿ): ಕಾಗಿನೆಲೆ ಮಹಾಸಂಸ್ಥಾನದ ಶ್ರೀ
ಕನಕಗುರು ಪೀಠಕ್ಕೆ ಎರಡನೇ ಜಗದ್ಗುರುಗಳಾಗಿ ಶ್ರೀ
ನಿರಂಜನಾನಂದರು ಪಟ್ಟಾಭಿಷಕ್ತರಾದರು.
ಬೆಂಗಳೂರಿನ ಕೈಲಾಸ ಆಶ್ರಮದ ಶ್ರೀ ಜಯೇಂದ್ರಪುರಿ ಸ್ವಾಮೀಜಿ,
ಚಿತ್ರದುರ್ಗದ ಮುರುಘ ಮಠದ ಶಿವಮೂರ್ತಿ ಮುರುಘ ರಾಜೇಂದ್ರ
ಶರಣರು, ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಮುಂತಾದ
ಪ್ರಮುಖ ಮಠಾಧೀಶರು, ಅನೇಕ ರಾಜಕೀಯ ಮುಖಂಡರು ಹಾಗೂ
ಲಕ್ಷಾಂತರ ಭಕ್ತಾದಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡರು.
ಪಟ್ಟಾಭಿಷೇಕದ ನಂತರ ಮಾತನಾಡಿದ ಶ್ರೀನಿರಂಜನಾನಂದಪುರಿ
ಸ್ವಾಮೀಜಿ `ಉಡುಪಿ ಹಾಗೂ ತಿರುಪತಿಯಲ್ಲಿ ಕನಕ ಶಾಖಾ ಪೀಠಗಳನ್ನು
ತೆರೆಯುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಹಿಂದಿನ ಗುರುಗಳು
ಹಾಕಿಕೊಟ್ಟ ಹಾದಿಯಲ್ಲೇ ನಡೆದು ಹಿಂದುಳಿದವರ ಏಳಿಗೆಗಾಗಿ ಶ್ರೀ
ಗುರುಪೀಠವು ಶ್ರಮಿಸಲಿದೆ' ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್. ವಿಶ್ವನಾಥ್
`ದೇಶದ ನಾನಾ ಕಡೆ ಇರುವ ಎಲ್ಲಾ ಬಗೆಯ ಕುರುಬ ಜನಾಂಗವನ್ನು
ಒಗ್ಗೂಡಿಸುವ ಪ್ರಯತ್ನ ಶ್ರೀ ಗುರುಪೀಠದ ಮುಂದಿದೆ.' ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ `ಸರ್ಕಾರ
ಹಿಂದುಳಿದವರು ಹಾಗೂ ಶೋಷಿತ ವರ್ಗವನ್ನು ನಡೆಸಿಕೊಳ್ಳುತ್ತಿರುವ
ರೀತಿಯನ್ನು ಖಂಡಿಸಿಬೇಕು. ಸಮಾಜದಲ್ಲಿ ಹಿಂದುಳಿದವರಿಗೆ ಸಮಪಾಲು
ಸಿಗಬೇಕು' ಎಂದರು.
ಇನ್ನಷ್ಟು
ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ಕೆಪಿಎಸ್ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|