|
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
ಬೀದರ್: ಬಸವ ಕಲ್ಯಾಣದಲ್ಲಿ ಅಕ್ಟೋಬರ್ ೨೭ರಿಂದ ಶರಣ
ಕಮ್ಮಟ ನಡೆಯಲಿದೆ. ಕಮ್ಮಟದಲ್ಲಿ ಖ್ಯಾತ ಬರಹಗಾರರು,
ವಿಚಾರವಾದಿಗಳು, ತಜ್ಞರು ಭಾಗವಹಿಸಲಿದ್ದಾರೆ. `ಬಸವ
ತತ್ವಗಳನ್ನು ಅಳವಡಿಸಿಕೊಂಡು ಆಧುನಿಕ ಜೀವನದ ಸಮಸ್ಯೆಗಳಿಗೆ
ಪರಿಹಾರ ಕಂಡುಕೊಳ್ಳುವ ಬಗ್ಗೆ ಈ ವಿಚಾರ ಸಂಕಿರಣ
ನಡೆಸಲಾಗುತ್ತಿದೆ' ಎಂದು ಕಮ್ಮಟದ ಸ್ವಾಗತ ಸಮಿತಿಯ
ಅಧ್ಯಕ್ಷರಾದ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಕರ್ನಾಟಕ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶರಣ
ಕಮ್ಮಟವನ್ನು ಉದ್ಘಾಟಿಸಲಿದ್ದಾರೆ.
`ಸಾಮಾಜಿಕ ವ್ಯವಸ್ಥೆಗೆ ಶರಣರ ಕೊಡುಗೆ', `ಮೂಢನಂಬಿಕೆ
ಹೋಗಲಾಡಿಸುವಲ್ಲಿ ಶರಣರ ಕೊಡುಗೆ' ಮುಂತಾದ ವಿಷಯಗಳ
ಬಗ್ಗೆ ಗೋಷ್ಠಿ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್, ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್
ಖರ್ಗೆ, ಮಾಜಿ ಮಂತ್ರಿ ಬಸವರಾಜ್ ಪಾಟೀಲ್ ಆತೂರ್ ಮುಂತಾದ ಗಣ್ಯರು
ಕಮ್ಮಟದಲ್ಲಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ `ಶ್ರೀ ಚೆನ್ನಬಸವ ಪಟ್ಟದೇವರು'
ಪುರಸ್ಕಾರವನ್ನು ಶ್ರೀ ಸಿದ್ಧರಾಮ ಶರಣ ಬೆಲ್ಲದ್ ಅವರಿಗೆ ಪ್ರದಾನ
ಮಾಡಲಾಗುವುದು ಎಂದು ಖಂಡ್ರೆ ತಿಳಿಸಿದ್ದಾರೆ.
ಇನ್ನಷ್ಟು
`ಬರಹ' ಸೃಷ್ಟಿಕರ್ತ ವಾಸುರವರಿಗೆ ಸನ್ಮಾನ
ಮೈಸೂರಿನಲ್ಲಿ ಮಧ್ಯರಾತ್ರಿ ಪಾಕ್ ಉಗ್ರರ ಸೆರೆ
ಧರ್ಮಸ್ಥಳ ಟ್ರಸ್ಟ್ನಿಂದ ಹೊಸ ನರ್ಸಿಂಗ್
ಕಾಲೇಜ್
ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಸಿದ್ಧು ದೂರು
ಮುಂದಿನ ಏಪ್ರಿಲ್ನಲ್ಲಿ ವಿಶ್ವ ಗೋವು ಸಮ್ಮೇಳನ
ಮಹಿಳೆಯರಿಗೆ ಮತ್ತಷ್ಟು ಕಾನೂನು ಬಲ
ಇನ್ನು ಮುಂದೆ ಒಂದೇ ಸಾಮಾನ್ಯ ಪರೀಕ್ಷೆ
ಸಿಎಂ ಮಗನನ್ನು ತದಕಿದ ಹೋಟೆಲ್ ಸಿಬ್ಬಂದಿ
ಎನ್ರಾನ್ ಸಂಸ್ಥೆ ಮಾಜಿ ಸಿಇಓಗೆ ೨೪ ವರ್ಷ ಜೈಲು
ಬ್ರಹ್ಮಪುತ್ರಕ್ಕೆ ಚೈನಾ
ಅಣೆಕಟ್ಟು: ಭಾರತಕ್ಕೆ ತಲೆನೋವು
|