|
`ಬರಹ' ಸೃಷ್ಟಿಕರ್ತ ವಾಸುರವರಿಗೆ ಸನ್ಮಾನ
ಗಣಕ ಯಂತ್ರ ಬಳಸುವ ಕನ್ನಡಿಗರಲ್ಲಿ `ಬರಹ' ಅರಿಯದವರು
ವಿರಳ. ಸದ್ಯಕ್ಕೆ ನ್ಯೂಯಾರ್ಕ್ನಲ್ಲಿ ವಾಸವಾಗಿರುವ ವಾಸು ಅವರು
ರಜೆಯ ಮೇಲೆ ತಾಯ್ನಾಡಿಗೆ ಮರಳಿದ್ದಾರೆ.
ಸುಮಾರು ೨೦ ಲಕ್ಷ ಜನಕ್ಕೆ ಅಗತ್ಯವಾದ, ವ್ಯಾಪಕವಾಗಿ
ಬಳಸಲಾಗುತ್ತಿರುವ `ಬರಹ' ದ ಸೃಷ್ಟಿಕರ್ತ ವಾಸುರವರ ಮೇಲೆ
ಕನ್ನಡಿಗರಿಗೆ ಅಭಿಮಾನ ಮೂಡುವುದು ಸಹಜ.
`ಬರಹ'ವನ್ನು ರಚಿಸಿ ಕನ್ನಡಕ್ಕೆ ಮಹದುಪಕಾರ ಮಾಡಿರುವ
ವಾಸು ಅವರನ್ನು ಕನ್ನಡ ಐ.ಟಿ. ಯುವ ಎಂಜಿನೀಯರುಗಳಿಗೆ
ಮುಖಾಮುಖಿಯಾಗಿಸುವ ಉದ್ದೇಶದಿಂದ `ಕನ್ನಡ ಸಾಹಿತ್ಯ. ಕಾಂ'
ತನ್ನ ಬೆಂಬಲಿಗರೊಂದಿಗೆ ವಾಸುರವರಿಗೆ ಸತ್ಕಾರ ಕೂಟವೊಂದನ್ನು
ಏರ್ಪಡಿಸಿದೆ.
ಆಸಕ್ತರು ತಮ್ಮ ಸಮಯವನ್ನು ತೆಗೆದಿರಿಸಿಕೊಂಡು ಅಕ್ಟೋಬರ್ ೨೯
ರಂದು ನಡೆಯಲಿರುವ ಈ ಸತ್ಕಾರ ಕಾರ್ಯಕ್ರಮಕ್ಕೆ ಆಗಮಿಸಲು
ಕನ್ನಡ ಸಾಹಿತ್ಯ ಡಾಟ್. ಕಾಂ ಬಳಗ ಕೋರಿದೆ.
ಸ್ಥಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಹಳೇ
ಜಿಲ್ಲಾಧಿಕಾರಿಯವರ ಕಚೇರಿ ಆವರಣ, ಕಾವೇರಿ ಭವನದ ಹತ್ತಿರ,
ಬೆಂಗಳೂರು.
ಸಮಯ : ಅಕ್ಟೋಬರ್ ೨೯, ಬೆಳಗ್ಗೆ ೧೦.೦೦ ಗಂಟೆ
ಇನ್ನಷ್ಟು
ಮೈಸೂರಿನಲ್ಲಿ ಮಧ್ಯರಾತ್ರಿ ಪಾಕ್ ಉಗ್ರರ ಸೆರೆ
ಧರ್ಮಸ್ಥಳ ಟ್ರಸ್ಟ್ನಿಂದ ಹೊಸ ನರ್ಸಿಂಗ್
ಕಾಲೇಜ್
ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಸಿದ್ಧು ದೂರು
ಮುಂದಿನ ಏಪ್ರಿಲ್ನಲ್ಲಿ ವಿಶ್ವ ಗೋವು ಸಮ್ಮೇಳನ
ಮಹಿಳೆಯರಿಗೆ ಮತ್ತಷ್ಟು ಕಾನೂನು ಬಲ
ಇನ್ನು ಮುಂದೆ ಒಂದೇ ಸಾಮಾನ್ಯ ಪರೀಕ್ಷೆ
ಸಿಎಂ ಮಗನನ್ನು ತದಕಿದ ಹೋಟೆಲ್ ಸಿಬ್ಬಂದಿ
ಎನ್ರಾನ್ ಸಂಸ್ಥೆ ಮಾಜಿ ಸಿಇಓಗೆ ೨೪ ವರ್ಷ ಜೈಲು
ಬ್ರಹ್ಮಪುತ್ರಕ್ಕೆ ಚೈನಾ
ಅಣೆಕಟ್ಟು: ಭಾರತಕ್ಕೆ ತಲೆನೋವು
ಆಪೆಲ್ ಮ್ಯೂಸಿಕ್ ಡೌನ್ಲೋಡರ್ ಹ್ಯಾಕರ್ನಿಂದ ಬ್ರೇಕ್
ರಿಲೆಯನ್ಸ್ ರಿಫೈನರಿಯಲ್ಲಿ ಬೆಂಕಿ ಆಕಸ್ಮಿಕ
ಬೆಂಗಳೂರಿನಲ್ಲಿ ಸದ್ಯದಲ್ಲೇ ಜೀವ ವೈವಿಧ್ಯ ಪಾರ್ಕ್
ತಮಿಳು ಪೊಲೀಸರಿಗೆ ಹುಂಡೈ ಸಂಸ್ಥೆಯ ಕಾರು
|