|
ಮುಂದಿನ ಏಪ್ರಿಲ್ನಲ್ಲಿ ವಿಶ್ವ ಗೋವು ಸಮ್ಮೇಳನ
ಬೆಂಗಳೂರು: ಅಳಿವಿನ ಅಂಚಿನಲ್ಲಿರುವ ಗೋವು ಸಂತತಿಗಳನ್ನು
ರಕ್ಷಿಸಲು ಮತ್ತು ಗೋವುಗಳ ಮಹತ್ವವನ್ನು ಸಾರಲು
ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ಏಪ್ರಿಲ್ ೨೧ ರಿಂದ
೨೯ರವರೆಗೆ ಒಂಬತ್ತು ದಿನಗಳ `ವಿಶ್ವ ಗೋವು ಸಮ್ಮೇಳನ' ವನ್ನು
ಹಮ್ಮಿಕೊಳ್ಳಲಾಗುವುದು ಎಂದು ಬುಧವಾರ ನಡೆದ
ಸುದ್ದಿಗೋಷ್ಠಿಯಲ್ಲಿ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತಿ
ಸ್ವಾಮೀಜಿ ಹೇಳಿದರು.
ಸಮ್ಮೇಳನದ ವಿಶೇಷತೆಗಳು:
ಸಮ್ಮೇಳನದಲ್ಲಿ
ಸಾವಿರಾರು ಗೋವುಗಳು ಮತ್ತು ೨೦ ಲಕ್ಷ ಜನರು ಭಾಗವಹಿಸುವ
ನಿರೀಕ್ಷೆ ಇದೆ.
ಮೊದಲ
ಬಾರಿಗೆ ಗೋವಿನ ರಥೋತ್ಸವ.
ಗೋ
ವಿಶ್ವಕೋಶ ಬಿಡುಗಡೆ.
ಗೋವಿಗೆ
ಸಂಬಂಧಿಸಿದ ಚಿತ್ರ, ಕಾವ್ಯ, ಶಿಲ್ಪಕಲೆ ಪ್ರದರ್ಶನ.
ಹಸುವಿನ
ಹಾಲಿನಿಂದ ತಯಾರಿಸಿದ ಖಾದ್ಯಗಳ ಮತ್ತು ಗೋವಿನ ಮತ್ತಿತರ
ಉತ್ಪನ್ನಗಳಿಂದ ತಯಾರಿಸಿದ ಔಷಧಿಗಳ ಪ್ರದರ್ಶನ.
ಮಹಿಳೆಯರು,
ಸಂತರು, ಕಲಾವಿದರು, ಯುವಕರು, ವಿಜ್ಞಾನಿಗಳು, ರೈತರು
ಹೀಗೆ ಸಮಾಜದ ವಿವಿಧ ವರ್ಗಗಳಿಗೆ ಬೇರೆ ಬೇರೆ ವಿಚಾರ ಸಂಕಿರಣ.
ಗೋವುಗಳ
ಇತಿಹಾಸ, ಕೃಷಿ, ಆರೋಗ್ಯ, ವಾಣಿಜ್ಯ, ಸಾಹಿತ್ಯ ಹೀಗೆ ಮುಂತಾದ
ವಿಷಯಗಳ ಜೊತೆ ಗೋವುಗಳ ಸಂಬಂಧದ ಕುರಿತು ಸಂವಾದ.
ಈ ರೀತಿ ಸಮ್ಮೇಳನದ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗಿದೆ.
ಅಲ್ಲದೆ ೧೨೧ ದಿನಗಳ `ಕಾಮಧೇನು ಮಹಾಯಾಗ'ವನ್ನು ಡಿಸೆಂಬರ್
೨೫ ರಿಂದ ಪ್ರಾರಂಭಿಸಲಾಗುವುದು. ಮತ್ತು ಗೋವುಗಳಿಂದ ಆಗುವ
ಆರ್ಥಿಕ ಲಾಭದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು `ಭಾರತೀಯ
ಗೋ ರಕ್ಷಾ ಪರಿಷತ್' ರಚಿಸಲಾಗುವುದು ಎಂದು ಇದೇ
ಸಂದರ್ಭದಲ್ಲಿ ಸ್ವಾಮೀಜಿ ಹೇಳಿದರು.
ಇನ್ನಷ್ಟು
ಮಹಿಳೆಯರಿಗೆ ಮತ್ತಷ್ಟು ಕಾನೂನು ಬಲ
ಇನ್ನು ಮುಂದೆ ಒಂದೇ ಸಾಮಾನ್ಯ ಪರೀಕ್ಷೆ
ಸಿಎಂ ಮಗನನ್ನು ತದಕಿದ ಹೋಟೆಲ್ ಸಿಬ್ಬಂದಿ
ಎನ್ರಾನ್ ಸಂಸ್ಥೆ ಮಾಜಿ ಸಿಇಓಗೆ ೨೪ ವರ್ಷ ಜೈಲು
ಬ್ರಹ್ಮಪುತ್ರಕ್ಕೆ ಚೈನಾ
ಅಣೆಕಟ್ಟು: ಭಾರತಕ್ಕೆ ತಲೆನೋವು
ಆಪೆಲ್ ಮ್ಯೂಸಿಕ್ ಡೌನ್ಲೋಡರ್ ಹ್ಯಾಕರ್ನಿಂದ ಬ್ರೇಕ್
ರಿಲೆಯನ್ಸ್ ರಿಫೈನರಿಯಲ್ಲಿ ಬೆಂಕಿ ಆಕಸ್ಮಿಕ
ಬೆಂಗಳೂರಿನಲ್ಲಿ ಸದ್ಯದಲ್ಲೇ ಜೀವ ವೈವಿಧ್ಯ ಪಾರ್ಕ್
ತಮಿಳು ಪೊಲೀಸರಿಗೆ ಹುಂಡೈ ಸಂಸ್ಥೆಯ ಕಾರು
ನವೆಂಬರ್ ೨ರಂದು ಎಸ್ಜೆಪಿ ರಸ್ತೆ ವಾಹನಗಳಿಗೆ ಮುಕ್ತ
ಪ್ರಸಿದ್ಧ ವೈದ್ಯ ನಾಗಲೋಟಿಮಠ ನಿಧನ
ಕರ್ನಾಟಕಕ್ಕೆ ೨೮ನೇ ಜಿಲ್ಲೆ ಸೇಪರ್ಡೆಯ ಸಾಧ್ಯತೆ
ಕೇಂದ್ರ ಸಂಪುಟದಲ್ಲಿ ಅಂಬಿಗೆ ಸ್ಥಾನ
ನೈಸರ್ಗಿಕ ಅನಿಲ ಕಂಪೆನಿಗಳಿಗೆ ನೂತನ ನೀತಿ
ಗೋಧಿ ಆಮದಿನಲ್ಲಿ ಭಾರತ ಎಲ್ಲರಿಗಿಂತ ಮುಂದೆ
ಗುಟ್ಕಾ ನಿಷೇಧ: ಅಡಿಕೆ ಬೆಳೆಗಾರರಲ್ಲಿ ಭೀತಿ
ಪೊಲೀಸರ ಮೈಮೇಲೇ ಬಿದ್ದ ಬಿದ್ದಪ್ಪನ ಪುತ್ರ
ನಮಗಾಗಿ ಒಂದು ದಿನ ಮೀಸಲಿಡಿ: ರೈತರ ಒತ್ತಾಯ
|