|
ಹಿಂದುಳಿದ ಶ್ರೀಮಂತರು ಮೀಸಲಿನಿಂದ ಹೊರಗೆ
ನವದೆಹಲಿ: ಪರಿಶಿಷ್ಟ ಜಾತಿ, ವರ್ಗ, ಮುಂತಾದ ಹಿಂದುಳಿದ
ವರ್ಗದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲು ನೀಡುವ ಸಂವಿಧಾನದ
ತಿದ್ದುಪಡಿಯ ಬಗ್ಗೆ ಸುಪ್ರೀಂ ಕೋರ್ಟ್ ಅನುಮೋದನೆ ವ್ಯಕ್ತ ಪಡಿಸಿ,
ಕೆಲವು ಆದೇಶಗಳನ್ನು ಹೊರಡಿಸಿದೆ.
ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶಗಳು ಹೀಗಿವೆ:
ಹಿಂದುಳಿದ
ವರ್ಗದ ಶ್ರೀಮಂತರನ್ನು ಮೀಸಲಿನಿಂದ ಹೊರಗಿಡಬೇಕು.
ಎಲ್ಲಾ
ವರ್ಗಗಳಿಗೆ ನೀಡುವ ಮೀಸಲು ಪ್ರಮಾಣ ಶೇ.೫೦ಕ್ಕಿಂತ
ಹೆಚ್ಚಿರಕೂಡದು.
ಬ್ಯಾಕ್ಲಾಗ್
ಹುದ್ದೆಗಳನ್ನು ಅನಿರ್ಧಿಷ್ಟ ಸಮಯದವರೆಗೆ ಮುಂದುವರಿಸಲು
ಸಾಧ್ಯವಿಲ್ಲ.
ಮೀಸಲಾತಿಯನ್ನು
ಜಾರಿತರುವ ಮುನ್ನ ಅದನ್ನು ಏಕೆ ಜಾರಿ ಮಾಡಲಾಗುತ್ತಿದೆ
ಎನ್ನುವುದನ್ನು ರಾಜ್ಯಗಳು ವಿಸ್ತಾರವಾಗಿ ವಿವರಿಸಬೇಕು.
ಮೀಸಲು
ಜಾರಿಯಿಂದ ಆಡಳಿತದ ಮೇಲಾಗುವ ಪರಿಣಾಮ, ಆಯಾ ಜಾತಿಗಳು
ಹಿಂದುಳಿದಿರುವ ಬಗ್ಗೆ ಮುಂತಾದ ವಿಷಯಗಳನ್ನು ರಾಜ್ಯಗಳು
ವಿವರಿಸಬೇಕು.
ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವೈ. ಕೆ.
ಸಬರ್ವಾಲ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನೊಳಗೊಂಡ
ಪೀಠ ಹೇಳಿದೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|