|
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
ನವದೆಹಲಿ: ಮೊಹಮ್ಮದ್ ಅಫಜಲ್ ರಾಷ್ಟ್ರಪತಿಯವರಿಗೆ
ಕ್ಷಮಾದಾನದ ಅರ್ಜಿಯನ್ನು ಸಲ್ಲಿಸಲಿದ್ದಾನೆ. ೨೦೦೧ರಲ್ಲಿ ಭಾರತದ
ಸಂಸತ್ತಿನ ಮೇಲೆ ಆಕ್ರಮಣಕಾರರಿಗೆ ಸಹಾಯ ಮಾಡಿದ
ಅಪರಾಧಕ್ಕಾಗಿ ಅಫಜಲ್ಗೆ ಮರಣದಂಡನೆ ವಿಧಿಸಲಾಗಿದೆ.
ಈಗಾಗಲೇ ಅಫಜಲ್ನ ಪತ್ನಿ ಮತ್ತು ಕುಟುಂಬ
ರಾಷ್ಟ್ರಪತಿಯವರನ್ನು ಭೇಟಿಯಾಗಿ ಅಫಜಲ್ಗೆ ಕ್ಷಮಾದಾನ
ನೀಡುವಂತೆ ವಿನಂತಿಸಿಕೊಂಡಿದ್ದಾರೆ.
ಆದರೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದರೆ ಮಾತ್ರ ರಾಷ್ಟ್ರಪತಿ
ಕ್ಷಮಾದಾನ ನೀಡಬಹುದಾಗಿದೆ. ಅಫಜಲ್ನ ತವರೂರಾದ
ಶ್ರೀನಗರ್ದಲ್ಲಿ ಅಫಜಲ್ನಿಗೆ ನೀಡಿರುವ ಮರದಂಡನೆಯನ್ನು
ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಜಮ್ಮು- ಕಾಶ್ಮೀರದ
ಮುಖ್ಯಮಂತ್ರಿ ಗುಲಾಮ್ ನಬಿ ಆಜಾದ್ ಕೂಡಾ ಅಫಜಲ್ಗೆ ನೀಡಿರುವ
ಮರಣದಂಡನೆಯನ್ನು ಪುನರ್ ವಿಮರ್ಶಿಸಲು ಕೇಳಿಕೊಂಡಿದ್ದಾರೆ.
ಅಕ್ಟೋಬರ್ ೨೦ ರಂದು ಅಫಜಲ್ನನ್ನು ನೇಣಿಗೇರಿಸಲು
ತೀರ್ಮಾನಿಸಲಾಗಿತ್ತು. ಆದರೆ ರಾಷ್ಟ್ರಪತಿಯವರು ತೀರ್ಮಾನ
ನೀಡುವವರೆಗೆ ಮರಣದಂಡನೆಯನ್ನು ಮುಂದೂಡಲಾಗಿರುವುದಾಗಿ
ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್ಸೈಟ್ ಖರೀದಿಸಿದ ಗೂಗಲ್
ಬಿಎಸ್ಎನ್ಎಲ್ನ ಎಸ್ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್ಗೆ ನೋಟೀಸ್
ಆರ್ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್ಸಿ ಇನ್ನು ಯುಪಿಎಸ್ಸಿ ಮಾದರಿಯಲ್ಲಿ
|