|
ಮೈಸೂರು, ಮಂಡ್ಯಗಳಿಗೆ ಭೇಟಿ ನೀಡಿದ ಕಲಾಂ
ಕರ್ನಾಟಕಕ್ಕೆ ಎರಡು ದಿನಗಳ ಭೇಟಿಗೆಂದು ಆಗಮಿಸಿದ ಕಲಾಂ
ರವಿವಾರ ಮಂಡ್ಯ ಮತ್ತು ಮೈಸೂರಿನ ಚಾಮರಾಜನಗರ ಜಿಲ್ಲೆಗೆ
ಆಗಮಿಸಿದ್ದರು.
ಚಾಮರಾಜನಗರ: ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ
ಬೆಳ್ಳಿಹಬ್ಬ ಮಹೋತ್ಸವ ಸಮಾರಂಭ ಉದ್ಘಾಟಿಸಲು ಕಲಾಂ ಬಿಳಿಗಿರಿ
ರಂಗನಬೆಟ್ಟಕ್ಕೆ ಭೇಟಿ ನೀಡಿದ್ದರು. ಸಮಾರಂಭವನ್ನು ಉದ್ಘಾಟಿಸಿ
ಮಾತನಾಡಿದ ಅವರು `ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ
ನಗರ ಪ್ರದೇಶಗಳಿಗೆ ಒದಗಿಸಲಾಗುವ ಸೌಕರ್ಯವನ್ನು ಹಳ್ಳಿಗೂ
ಒದಗಿಸಬೇಕು. ಹಳ್ಳಿಗಳಿಗೆ ಅಂತರ್ಜಾಲ ಸಂಪರ್ಕ ಸೇರಿದಂತೆ
ಮತ್ತಿತರ ಸೌಲಭ್ಯಗಳನ್ನು ಸಂಘ ಸಂಸ್ಥೆಗಳ ಸಹಾಯದಿಂದ
ಸರ್ಕಾರ ಒದಗಿಸಬೇಕು ಎಂದು ಹೇಳಿದರು.
ಭಯೋತ್ಪಾದನೆ ನಿಗ್ರಹಿಸಲು ಯುವಕರು ಒಟ್ಟಾಗ ಬೇಕು: ಕಲಾಂ
ಮಂಡ್ಯ: ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ
ವೈದ್ಯಕೀಯ ಕಾಲೇಜಿನ ನೂತನ ಕಟ್ಟಡವನ್ನು ಕಲಾಂ
ಉದ್ಘಾಟಿಸಿದರು.
`ಬಡತನ, ಜನಸಂಖ್ಯೆಯೊಂದಿಗೆ ಭಯೋತ್ಪಾದನೆ ಒಂದು ಹೊಸ
ಸಮಸ್ಯೆಯಾಗಿ ಎದುರಾಗಿದೆ. ಯುವಸಮುದಾಯ ಒಗ್ಗಟ್ಟಿನಿಂದ
ಪ್ರಯತ್ನಿಸಿದರೆ ಈ ಸಮಸ್ಯೆಗಳನ್ನು ಪರಿಹರಿಸಬಹುದು' ಎಂದು
ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್ಸೈಟ್ ಖರೀದಿಸಿದ ಗೂಗಲ್
ಬಿಎಸ್ಎನ್ಎಲ್ನ ಎಸ್ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್ಗೆ ನೋಟೀಸ್
ಆರ್ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್ಸಿ ಇನ್ನು ಯುಪಿಎಸ್ಸಿ ಮಾದರಿಯಲ್ಲಿ
|