|
ಐಐಎಸ್ಸಿಯಿಂದ ಸಣ್ಣ ಕಥೆ ಸ್ಪರ್ಧೆಗೆ ಅರ್ಜಿ ಆಹ್ವಾನ
ಬೆಂಗಳೂರು: ಭಾರತೀಯ ವಿಜ್ಞಾನ ಸಂಶೋಧನಾ
ಸಂಸ್ಥೆ(ಐಐಎಸ್ಸಿ)ಯ ಕನ್ನಡ ವಿದ್ಯಾರ್ಥಿಗಳ ಬಳಗವು `ಕನ್ನಡ
ರಾಜ್ಯೋತ್ಸವ'ದ ಅಂಗವಾಗಿ `ಸಣ್ಣಕಥೆ ಸ್ಪರ್ಧೆ'ಯನ್ನು
ನಡೆಸುತ್ತಿದ್ದಾರೆ. ಆಸಕ್ತರು ಕಥೆಗಳನ್ನು ಅಕ್ಟೋಬರ್ ೨೫ ರ
ಒಳಗಾಗಿ ಕಳುಹಿಸಬಹುದು. ಕಥೆಗಳನ್ನು ಈ ಮೈಲ್ ಮೂಲಕವೂ
ಕಳಿಸಬಹುದು ಹಾಗೂ ಹಸ್ತಪ್ರತಿಯನ್ನು ಅಂಚೆಯ ಮೂಲಕ ಕಳುಹಿಸಬಹುದು.
ಕಥೆ ಬರೆಯುವವರಿಗಾಗಿ ಕೆಲವು ನಿಯಮಾವಳಿಗಳು:
ಕಥೆಗಳು
ಕನ್ನಡದಲ್ಲಿ ಬರೆದುದಾಗಿದ್ದು ೧೦೦೦ ಪದಗಳನ್ನು ಮೀರಬಾರದು. ಈ
ಮೇಲ್ ಮಾಡುವವರು ಬರಹ ಲಿಪಿ(ಫಾಂಟ್) ಉಪಯೋಗಿಸಿ ಟೈಪ್
ಮಾಡಿದ ಕಥೆಯನ್ನು ಕಳಿಸತಕ್ಕದ್ದು.
ಕಥೆ
ಸ್ವಂತದ್ದಾಗಿರಬೇಕು. ಅನುವಾದಿತ ಕಥೆಗಳಿಗೆ ಅವಕಾಶವಿಲ್ಲ.
ಕಥೆ
ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು.
ಒಬ್ಬರು
ಗರಿಷ್ಠ ಎರಡು ಕಥೆಗಳನ್ನು ಕಳುಹಿಸಬಹುದು.
ಕಥೆಯ
ಜೊತೆಗೆ ಲೇಖಕರ ಹೆಸರು, ಅಂಚೆವಿಳಾಸ, ದೂರವಾಣಿ ಸಂಖ್ಯೆ, ಈ
ಮೇಲ್ ವಿಳಾಸ ಬರೆಯತಕ್ಕದ್ದು.
ಅಂತಿಮ
ತೀರ್ಮಾನ ತೀರ್ಪುಗಾರರದ್ದು.
ಕಥೆಗಳನ್ನು ಹೆಸರಾಂತ ಕನ್ನಡ ಲೇಖಕರಿಂದ
ಮೌಲ್ಯಮಾಪನ ಮಾಡಿಸಲಾಗುವುದು. ಬಹುಮಾನಿತ ಕಥೆಗಳನ್ನು
ಐಐಎಸ್ಸಿ ಕನ್ನಡ ಬಳಗದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗುವುದು.
ಬಹುಮಾನಗಳನ್ನು ನವೆಂಬರ್ ೧ ರಂದು ನಡೆಯುವ
`ರಾಜ್ಯೋತ್ಸವ ಸಮಾರಂಭ'ದಲ್ಲಿ ವಿತರಿಸಲಾಗುವುದು.
ಕಥೆಗಳನ್ನು ಕಳಿಸಬೇಕಾದ ವಿಳಾಸ:
ಪೂರ್ಣಿಮಾ ಪ್ರಿಯಾದರ್ಶಿನಿ. ಸಿ. ಜಿ.
c/o,
ಪ್ರೋ. ಹೆಚ್. ಎಸ್. ಸಾವಿತ್ರಿ
ಬಯೋಕೆಮಿಸ್ಟ್ರಿ ವಿಭಾಗ,
ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ,
ಬೆಂಗಳೂರು-೫೬೦ ೦೧೨.
ಈ ಮೇಲ್ ಮೂಲಕ ಕಳುಹಿಸಬೇಕಾದ ವಿಳಾಸ:
nityotsava@gmail.com
ಹೆಚ್ಚಿನ ವಿವರಗಳಿಗಾಗಿ ಐಐಎಸ್ಸಿಯ ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ-
http://www.nityotsava.org/
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್ಸೈಟ್ ಖರೀದಿಸಿದ ಗೂಗಲ್
ಬಿಎಸ್ಎನ್ಎಲ್ನ ಎಸ್ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್ಗೆ ನೋಟೀಸ್
ಆರ್ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್ಸಿ ಇನ್ನು ಯುಪಿಎಸ್ಸಿ ಮಾದರಿಯಲ್ಲಿ
|