ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಮಂಗಳೂರು: ಮಂಗಳೂರು ಮತ್ತು ಸುತ್ತಮುತ್ತಲ
ಪ್ರದೇಶಗಳಲ್ಲಿ ಶುಕ್ರವಾರವೂ ಹಿಂಸಾಚಾರ ಮುಂದುವರಿದಿದೆ. ಕಲ್ಲು
ತೂರಾಟ, ವಾಹನ, ಅಂಗಡಿಗಳಿಗೆ ಬೆಂಕಿ ಹಚ್ಚುವುದು, ಇರಿತಗಳಂತಹ
ಘಟನೆಗಳು ನಡೆದಿವೆ.
ಮಂಗಳೂರು ಜಿಲ್ಲೆಯ ಶುಕ್ರವಾರದ
ಸ್ಥಿತಿಗತಿ:
ಮಂಗಳೂರು ಮತ್ತು ಬಂಟ್ವಾಳ ತಾಲ್ಲೂಕುಗಳಲ್ಲಿ ವಿಧಿಸಿದ್ದ ನಿಷೇಧಾಜ್ಞೆಯನ್ನು
ಇಡೀ ಜಿಲ್ಲೆಗೆ ವಿಸ್ತರಿಸಲಾಗಿದೆ. ಅ. ೮ ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.
ಸುಳ್ಯ ಒಂದನ್ನು ಹೊರತು ಪಡಿಸಿ ಜಿಲ್ಲೆಯ ಎಲ್ಲೆಡೆ ಎರಡನೆಯ
ದಿನಕ್ಕೆ ಬಂದ್ ಮುಂದುವರಿದಿದೆ. ಜನಜೀವನ ಅಸ್ತವ್ಯಸ್ತ.
ಒಟ್ಟು ೩೬ ಪ್ರಕರಣಗಳನ್ನು ದಾಖಲಿಸಿಕೊಂಡು ೮೦ ಜನರನ್ನು ಬಂಧಿಸಲಾಗಿದೆ.
ಗಲಭೆ ನಿಲ್ಲಿಸಲು ನಿಷೇಧಾಜ್ಞೆ ಜಾರಿಯಲ್ಲಿರುವಲ್ಲಿ `ಕಂಡಲ್ಲಿ
ಗುಂಡು' ಆದೇಶ ನೀಡಲಾಗಿದೆ.
ಬಂಟ್ವಾಳ ತಾಲ್ಲೂಕಿನ ಫಿರಂಗಿ ಪೇಟೆಯಲ್ಲಿ ಇಬ್ಬರಿಗೆ ಚೂರಿಯಿಂದ ಇರಿತ.
ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಶಿಗ್ಗಾಂವ್, ಗುಲ್ಬರ್ಗಾ, ಶಿವಮೊಗ್ಗದಿಂದ
ಹೆಚ್ಚಿನ ಪೊಲೀಸ್ ತುಕಡಿಗಳನ್ನು ಕರೆಯಿಸಿಕೊಳ್ಳಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಜೊತೆ
ಮಂಗಳೂರು ಪರಿಸ್ಥಿತಿಯ ಬಗ್ಗೆ ರಾಜ್ಯ ಗೃಹ ಸಚಿವ ಎಂ. ಪಿ. ಪ್ರಕಾಶ್
ಚರ್ಚೆ ನಡೆಸಿದ ನಂತರ ಶುಕ್ರವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಪತ್ರಕರ್ತರ ಜೊತೆ ಮಾತನಾಡುತ್ತ ಉಲ್ಲಾಳದಲ್ಲಿ ನಡೆದ ಹಿಂಸಾಚಾರ
ಹಿಂದೆ ಶಾಸಕರ ಪುತ್ರನೊಬ್ಬನ ಕೈವಾಡದ ಶಂಕೆ ವ್ಯಕ್ತಪಡಿಸಿದ್ದಾರೆ.
ಆದರೆ ಹೆಸರನ್ನು ಬಹಿರಂಗ ಪಡಿಸಲಿಲ್ಲ.