ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
ನವದೆಹಲಿ: ಜೆಸ್ಸಿಕಾ ಲಾಲ್ ಕೊಲೆ ಪ್ರಕರಣದಲ್ಲಿ
ಭಾಗಿಯಾದ ಮನು ಶರ್ಮಾನ ತಂದೆ ಮತ್ತು ಹರಿಯಾಣದ ವಿದ್ಯುತ್
ಹಾಗೂ ಲೋಕೋಪಯೋಗಿ ಸಚಿವ ಮಂತ್ರಿ ವಿನೋದ್ ಶರ್ಮಾ ಶುಕ್ರವಾರ
ತಮ್ಮ ರಾಜೀನಾಮೆಯನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೊನಿಯ
ಗಾಂಧಿಗೆ ರವಾನಿಸಿದ್ದಾರೆ.
ಈ ವರ್ಷದ ಪ್ರಾರಂಭದಿಂದಲೂ ಹರಿಯಾಣದ ಪ್ರತಿಪಕ್ಷವಾದ
ಭಾರತೀಯ ರಾಷ್ಟ್ರೀಯ ಲೋಕದಳ ಶರ್ಮಾರ ರಾಜೀನಾಮೆಗೆ
ಒತ್ತಾಯಿಸುತ್ತಲೇ ಇತ್ತು.
ಪಕ್ಷದ ಘನತೆ-ಗೌರವಕ್ಕೆ
ಕುಂದುಂಟಾಗಬಾರದೆಂದು ವಿನೋದ್ ಶರ್ಮಾ ರಾಜೀನಾಮೆ ನೀಡಿದ್ದಾರೆ
ಎಂದು ಮೂಲಗಳು ತಿಳಿಸಿವೆ.